SDAA-2013 Paper-I General Paper Questions with answers
ದಿನಾಂಕ 24.02.2013 ರಂದು ಕರ್ನಾಟಕ ಲೋಕಸೇವಾ ಆಯೋಗವು ನಡೆಸಿದ ದ್ವಿತೀಯ ದರ್ಜೆ ಲೆಕ್ಕ ಸಹಾಯಕ [SDAA] ಸಾಮಾನ್ಯ ಪತ್ರಿಕೆ - ಪತ್ರಿಕೆ-Iರ ಪ್ರಶ್ನೆಗಳನ್ನು ಉತ್ತರದೊಂದಿಗೆ ಇಲ್ಲಿ ನೀಡಲಾಗಿದೆ.
1. | ಬಿಹಾರ್ ರಾಜ್ಯದ ಝಾರಿಯಾದಲ್ಲಿ | |
(1) | ಚಿನ್ನದ ಗಣಿಗಳು ಇವೆ | |
(2) | ತಾಮ್ರದ ಗಣಿಗಳು ಇವೆ | |
(3) | ಕಬ್ಬಿಣದ ಅದುರಿನ ಗಣಿಗಳು ಇವೆ | |
(4) | ಕಲ್ಲಿದ್ದಲ ಗಣಿಗಳು ಇವೆ |
ಸರಿ ಉತ್ತರ
(4) ಕಲ್ಲಿದ್ದಲ ಗಣಿಗಳು ಇವೆ
2. | ಭಾರತದ ಅತಿ ದೊಡ್ಡ ಅಭ್ರಕ ನಿಕ್ಷೇಪಗಳು ಕೆಳಕಂಡ ರಾಜ್ಯದಲ್ಲಿವೆ. | |
(1) | ಆಂಧ್ರಪ್ರದೇಶ | |
(2) | ಕೇರಳ | |
(3) | ಜಾರ್ಖಂಡ್ | |
(4) | ತಮಿಳುನಾಡು |
ಸರಿ ಉತ್ತರ
(3) ಜಾರ್ಖಂಡ್
3. | ಕರ್ನಾಟಕದ ಬಿಳಿಗಿರಿರಂಗನ ಬೆಟ್ಟದಲ್ಲಿರುವ ಬುಡಕಟ್ಟು ಜನರು | |
(1) | ಬಿಲ್ಲವರು | |
(2) | ಸೋಲಿಗರು | |
(3) | ಹಕ್ಕಿಪಿಕ್ಕಿಗಳು | |
(4) | ಕಾಡುಕುರುಬರು |
ಸರಿ ಉತ್ತರ
(2) ಸೋಲಿಗರು
4. | ಭಾರತದಲ್ಲಿ ಭೌಗೋಳಿಕ ಲಕ್ಷಣಗಳಿಗೆ ಸಂಬಂಧಿಸಿದ ಭೂಪಟಗಳನ್ನು ಪ್ರಕಟಿಸುವ ಸಂಸ್ಥೆ | |
(1) | ಸರ್ವೆ ಆಫ್ ಇಂಡಿಯಾ | |
(2) | ಭಾರತೀಯ ಪವನಶಾಸ್ತ್ರ ಇಲಾಖೆ | |
(3) | ರಾಷ್ಟ್ರೀಯ ಅಟ್ಲಾಸ್ ಮತ್ತು ಥಿಮ್ಯಾಟಿಕ್ ಮ್ಯಾಪಿಂಗ್ ಸಂಸ್ಥೆ | |
(4) | ರಾಷ್ಟ್ರೀಯ ದೂರ ಸಂವೇದಿ ಸಂಸ್ಥೆ |
ಸರಿ ಉತ್ತರ
(1) ಸರ್ವೆ ಆಫ್ ಇಂಡಿಯಾ
5. | ಇಂದ್ರಾವತಿ ನದಿಯು ಯಾವುದರ ಉಪನದಿಯಾಗಿದೆ ? | |
(1) | ಗಂಗಾ | |
(2) | ಮಹಾನದಿ | |
(3) | ಕೃಷ್ಣಾ | |
(4) | ಗೋದಾವರಿ |
ಸರಿ ಉತ್ತರ
(4) ಗೋದಾವರಿ
6. | ಕಾರವಾರದಲ್ಲಿರುವ ಭಾರತೀಯ ನೌಕಾನೆಲೆಯ ಹೆಸರು | |
(1) | INS ಕುಶಾನ್ | |
(2) | INS ಹರ್ಷವರ್ಧನ | |
(3) | INS ವಿಕ್ರಮಾದಿತ್ಯ | |
(4) | INS ಕದಂಬ |
ಸರಿ ಉತ್ತರ
(4) INS ಕದಂಬ
7. | ಶಿಪ್ ಕಿ ಲಾ ಎನ್ನುವುದು ಕೆಳಕಂಡ ನದೀಕಣಿವೆಯಲ್ಲಿರುವ ಒಂದು ಪರ್ವತ ಕಿರುದಾರಿ (Mountain Pass) | |
(1) | ಚೀನಾಬ್ | |
(2) | ಸಟ್ಲೆಜ್ | |
(3) | ಜೀಲಂ | |
(4) | ಬಿಯಾಸ್ |
ಸರಿ ಉತ್ತರ
(2) ಸಟ್ಲೆಜ್
8. | ವಿಕ್ಟೋರಿಯಾ ಮೆಮೋರಿಯಲ್ ಎಲ್ಲಿದೆ ? | |
(1) | ಬೆಂಗಳೂರು | |
(2) | ಕೋಲ್ಕೊತ್ತಾ | |
(3) | ಮುಂಬೈ | |
(4) | ನವದೆಹಲಿ |
ಸರಿ ಉತ್ತರ
(2) ಕೋಲ್ಕೊತ್ತಾ
9. | ಭಾರತದ ಏಕೈಕ ಕತ್ತೆಗಳ ಧಾಮವು ಎಲ್ಲಿದೆ ? | |
(1) | ರಾಜಸ್ಥಾನ | |
(2) | ಬಿಹಾರ್ | |
(3) | ಮಧ್ಯಪ್ರದೇಶ್ | |
(4) | ಗುಜರಾತ್ |
ಸರಿ ಉತ್ತರ
(4) ಗುಜರಾತ್
10. | ರಾಣಿ ಝಾನ್ಸಿ ಕಡಲ ರಾಷ್ಟ್ರೀಯ ಉದ್ಯಾನವು ಎಲ್ಲಿದೆ ? | |
(1) | ತಮಿಳುನಾಡು | |
(2) | ಅಂಡಮಾನ್ ಮತ್ತು ನಿಕೋಬಾರ್ | |
(3) | ಗುಜರಾತ್ | |
(4) | ಒಡಿಶಾ |
ಸರಿ ಉತ್ತರ
(2) ಅಂಡಮಾನ್ ಮತ್ತು ನಿಕೋಬಾರ್
11. | ರಾಜಸ್ಥಾನದಲ್ಲಿ ನಡೆಯುವ ಒಂಟೆ ವ್ಯಾಪಾರದ ವಾರ್ಷಿಕ ಜಾತ್ರೆ | |
(1) | ಕುಂಭ ಮೇಳ | |
(2) | ಸೂರಜ್ ಕುಂಡ್ ಮೇಳ | |
(3) | ಪುಷ್ಕರ ಮೇಳ | |
(4) | ಕೃಷಿ ಮೇಳ |
ಸರಿ ಉತ್ತರ
(3) ಪುಷ್ಕರ ಮೇಳ
12. | ನಿರ್ವಹಣೆಯಾಗದ ಸ್ವತ್ತು (NPA) ಎಂಬುದು ಏನನ್ನು ಸೂಚಿಸುತ್ತದೆ ? | |
(1) | ಎರವಲು ಪಡೆದವರು ನಿಗದಿಪಡಿಸಿದ ಅವಧಿಯೊಳಗಾಗಿ ಬಡ್ಡಿ ಹಾಗೂ ಕಂತುಗಳ ಮರುಪಾವತಿ ಮಾಡದಿರುವಂಥ ಬ್ಯಾಂಕಿನ ಸಾಲ | |
(2) | ಯಾವುದೇ ಆದಾಯವನ್ನು ದೊರಕಿಸದಿರುವಂತಹ ಭೂಮಿ ಮತ್ತು ಕಟ್ಟಡ ಮೊದಲಾದ ಅಚರ ಸ್ವತ್ತು | |
(3) | ಕಡಿಮೆ ಆದಾಯವನ್ನು ದೊರಕಿಸುವಂಥ ಬ್ಯಾಂಕಿನ ಸ್ವತ್ತು | |
(4) | ಆರ್.ಬಿ.ಐ ನಿರ್ದೇಶನದ ಪ್ರಕಾರ ಆದ್ಯತಾ ನೀಡಿಕೆ |
ಸರಿ ಉತ್ತರ
(1) ಎರವಲು ಪಡೆದವರು ನಿಗದಿಪಡಿಸಿದ ಅವಧಿಯೊಳಗಾಗಿ ಬಡ್ಡಿ ಹಾಗೂ ಕಂತುಗಳ ಮರುಪಾವತಿ ಮಾಡದಿರುವಂಥ ಬ್ಯಾಂಕಿನ ಸಾಲ
13. | ____________ ಎನ್ನುವುದು ಬ್ಯಾಂಕುಗಳು ತಮ್ಮ ಅಲ್ಪಾವಧಿ ಲಿಕ್ವಿಡಿಟಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿ ಸ್ವಲ್ಪಕಾಲ ಇರಿಸುವಂಥ ದರ. | |
(1) | ರಿಪೊ ದರ | |
(2) | ವಿಪರ್ಯಯ ರಿಪೊ ದರ | |
(3) | ಪ್ರೈಮ್ ಲೆಂಡಿಂಗ್ ದರ | |
(4) | ಠೇವಣಿ ಬಡ್ಡಿ |
ಸರಿ ಉತ್ತರ
(2) ವಿಪರ್ಯಯ ರಿಪೊ ದರ
14. | ಹಣದುಬ್ಬರ ಎನ್ನುವುದು | |
(1) | ಕೆಲವೇ ಕೆಲವು ಸರಕುಗಳನ್ನು ಅತಿಯಾದ ಹಣವು ಬೆನ್ನಟ್ಟುತ್ತಿರುವಂಥ ಸ್ಥಿತಿ. | |
(2) | ಹಣದ ಮೌಲ್ಯವು ಹೆಚ್ಚಾಗುತ್ತಿರುವ ಸ್ಥಿತಿ. | |
(3) | ಸರಬರಾಜಾಗುತ್ತಿರುವ ಸರಕುಗಳು ಮತ್ತು ಸೇವೆಗಳ ಪ್ರಮಾಣಕ್ಕಿಂತ ಬೇಡಿಕೆಯು ಕಡಿಮೆಯಾಗಿರುವ ಸ್ಥಿತಿ. | |
(4) | ಬೇಡಿಕೆಗಿಂತ ಹಣದ ಸರಬರಾಜಿನ ಪ್ರಮಾಣವು ಕಡಿಮೆಯಾಗಿರುವ ಸ್ಥಿತಿ |
ಸರಿ ಉತ್ತರ
(1) ಕೆಲವೇ ಕೆಲವು ಸರಕುಗಳನ್ನು ಅತಿಯಾದ ಹಣವು ಬೆನ್ನಟ್ಟುತ್ತಿರುವಂಥ ಸ್ಥಿತಿ.
15. | ಭಾರತದ ರೈತರಿಗೆ ಅಗತ್ಯವಾಗಿರುವ ಅಲ್ಪಾವಧಿ ಸಾಲದ ಅವಧಿಯು ಕೇವಲ | |
(1) | ಆರು ತಿಂಗಳು | |
(2) | 15 ತಿಂಗಳು | |
(3) | 3 ತಿಂಗಳು | |
(4) | 3 ವರ್ಷಗಳು |
ಸರಿ ಉತ್ತರ
(2) 15 ತಿಂಗಳು
16. | ಭಾರತದ ರಿಸರ್ವ್ ಬ್ಯಾಂಕು ರಾಷ್ಟ್ರೀಕರಣಗೊಂಡ ವರ್ಷ | |
(1) | 1969 | |
(2) | 1935 | |
(3) | 1955 | |
(4) | 1949 |
ಸರಿ ಉತ್ತರ
(4) 1949
17. | ಭಾರತದ ಪೂರ್ವದತ್ತ ನೋಡಿ ನೀತಿಯನ್ನು (Look East Policy) ಜನಪ್ರಿಯಗೊಳಿಸಿದ ಪ್ರಧಾನಮಂತ್ರಿ | |
(1) | ಇಂದಿರಾ ಗಾಂಧಿ | |
(2) | ನರಸಿಂಹರಾವ್ | |
(3) | ವಿ.ಪಿ. ಸಿಂಗ್ | |
(4) | ಜವಾಹರಲಾಲ್ ನೆಹರೂ |
ಸರಿ ಉತ್ತರ
(2) ನರಸಿಂಹರಾವ್
18. | ‘ಸಂಪೂರ್ಣ ಕ್ರಾಂತಿ’ ಯ ಪರಿಕಲ್ಪನೆಯನ್ನು ಪ್ರತಿಪಾದಿಸಿದವರು : | |
(1) | ಜಯಪ್ರಕಾಶ್ ನಾರಾಯಣ್ | |
(2) | ರಾಜ್ ನಾರಾಯಣ್ | |
(3) | ಎಂ.ಎನ್.ರಾಯ್ | |
(4) | ಮಹಾತ್ಮ ಗಾಂಧಿ |
ಸರಿ ಉತ್ತರ
(1) ಜಯಪ್ರಕಾಶ್ ನಾರಾಯಣ್
19. | ಬ್ರಿಟಿಷ್ ಸಂಸದೀಯ ವ್ಯವಸ್ಥೆಯನ್ನು ಈ ಕೆಳಗಿನಂತೆಯೂ ಉಲ್ಲೇಖಿಸುತ್ತಾರೆ : | |
(1) | ದಿ ವೆಸ್ಟ್ ಮಿನ್ ಸ್ಟರ್ ಮಾಡೆಲ್ | |
(2) | ದಿ ಕಲೆಜಿಯೇಟ್ ಮಾಡೆಲ್ | |
(3) | ದಿ ಬಂಡೆಸ್ಟ್ಯಾಗ್ ಮಾಡೆಲ್ | |
(4) | ದಿ ಲಂಡನ್ ಮಾಡೆಲ್ |
ಸರಿ ಉತ್ತರ
(1) ದಿ ವೆಸ್ಟ್ ಮಿನ್ ಸ್ಟರ್ ಮಾಡೆಲ್
20. | ಭಾರತದಲ್ಲಿ ನ್ಯಾಯಿಕ ಪುನರಾವಲೋಕನದ ಅಧಿಕಾರವನ್ನು | |
(1) | ಉನ್ನತ ನ್ಯಾಯಾಲಯಗಳು ಮಾತ್ರ ಅನುಭವಿಸುತ್ತವೆ. | |
(2) | ಸರ್ವೋನ್ನತ ನ್ಯಾಯಾಲಯವು ಮಾತ್ರ ಅನುಭವಿಸುತ್ತವೆ. | |
(3) | ಸರ್ವೋನ್ನತ ನ್ಯಾಯಾಲಯ ಹಾಗೂ ಉನ್ನತ ನ್ಯಾಯಾಲಯಗಳು ಅನುಭವಿಸುತ್ತವೆ. | |
(4) | ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯಗಳು ಅನುಭವಿಸುತ್ತವೆ. |
ಸರಿ ಉತ್ತರ
(3) ಸರ್ವೋನ್ನತ ನ್ಯಾಯಾಲಯ ಹಾಗೂ ಉನ್ನತ ನ್ಯಾಯಾಲಯಗಳು ಅನುಭವಿಸುತ್ತವೆ.
21. | ಭಾರತೀಯ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳನ್ನು | |
(1) | ಸಂವಿಧಾನದ ಭಾಗ II ರಲ್ಲಿ ಅಳವಡಿಸಲಾಗಿದೆ. | |
(2) | ಸಂವಿಧಾನದ ಭಾಗ IV ರಲ್ಲಿ ಅಳವಡಿಸಲಾಗಿದೆ. | |
(3) | ಸಂವಿಧಾನದ ಭಾಗ V ರಲ್ಲಿ ಅಳವಡಿಸಲಾಗಿದೆ. | |
(4) | ಸಂವಿಧಾನದ ಭಾಗ III ರಲ್ಲಿ ಅಳವಡಿಸಲಾಗಿದೆ. |
ಸರಿ ಉತ್ತರ
(4) ಸಂವಿಧಾನದ ಭಾಗ III ರಲ್ಲಿ ಅಳವಡಿಸಲಾಗಿದೆ.
22. | ಈಗ ಹೆಚ್ಚು ಹೆಚ್ಚಾಗಿ ಕೇಳಿ ಬರುತ್ತಿರುವ ‘ಕಾಂಡಕೋಶ’ ಗಳಿಗೆ (Stem Cells) ಸಂಬಂಧಿಸಿದಂತೆ ಈ ಕೆಳಗಿನ ಯಾವ ವಿವರಣೆಯು/ಗಳು ಸರಿಯಾಗಿವೆ ? | |
I. | ಕಾಂಡಕೋಶಗಳನ್ನು ಸಸ್ತನಿಗಳಿಂದ ಮಾತ್ರ ಪಡೆದುಕೊಳ್ಳಬಹುದು. | |
II. | ಕಾಂಡಕೋಶಗಳನ್ನು ಹೊಸ ಔಷಧಗಳ ಪರೀಕ್ಷಣೆಗಾಗಿ ಬಳಸಿಕೊಳ್ಳಬಹುದು. | |
III. | ಕಾಂಡಕೋಶಗಳನ್ನು ವೈದ್ಯಕೀಯ ಚಿಕಿತ್ಸೆಗಳಿಗೆ ಬಳಸಿಕೊಳ್ಳಬಹುದು. | |
ಕೆಳಗೆ ಕೊಟ್ಟಿರುವ ಸಂಕೇತಗಳನ್ನು ಬಳಸಿ ಸರಿ ಉತ್ತರವನ್ನು ಆಯ್ಕೆ ಮಾಡಿ. | ||
(1) | I ಮತ್ತು II | |
(2) | II ಮತ್ತು III | |
(3) | III ಮಾತ್ರ | |
(4) | I, II ಮತ್ತು III |
ಸರಿ ಉತ್ತರ
(2) II ಮತ್ತು III
23. | ಭಾರತದ ವನ್ಯಜೀವಿ ಸಂದರ್ಭದಲ್ಲಿ ಯಾವುದನ್ನು ಫ್ಲೈಯಿಂಗ್ ಫಾಕ್ಸ್ ಎಂದು ಕರೆಯುತ್ತಾರೆ? | |
(1) | ಬಾವಲಿ | |
(2) | ಗಿಡುಗ | |
(3) | ಕೊಕ್ಕರೆ | |
(4) | ರಣಹದ್ದು |
ಸರಿ ಉತ್ತರ
(1) ಬಾವಲಿ
24. | 1909ರ ಇಂಡಿಯನ್ ಕೌನ್ಸಿಲ್ ಆ್ಯಕ್ಟ್ ಅನ್ನು ಹೀಗೂ ಕರೆಯಲಾಗುತ್ತದೆ. | |
(1) | ಮಾಂಟೆಗ್ಯೂ-ಚಲ್ಮ್ಸ್ ಫರ್ಡ್ | |
(2) | ಮಹಾರಾಣಿಯ ಉದ್ಘೋಷಣೆ | |
(3) | ಮಿಂಟೋ-ಮಾರ್ಲೆ ಸುಧಾರಣೆಗಳು | |
(4) | ಮಾಂಟೆಗ್ಯೂ-ಮಾರ್ಲೆ ಸುಧಾರಣೆಗಳು |
ಸರಿ ಉತ್ತರ
(3) ಮಿಂಟೋ-ಮಾರ್ಲೆ ಸುಧಾರಣೆಗಳು
25. | ಈ ಕೆಳಕಂಡ ಕೊಕ್ಕರೆಯು ಸ್ವಚ್ಛಗೊಳಿಸುವ ಕೆಲಸವನ್ನು ಮಾಡುತ್ತದೆ. | |
(1) | Adjutant ಕೊಕ್ಕರೆ | |
(2) | ಬಿಳಿಕೊಕ್ಕರೆ | |
(3) | Painted ಕೊಕ್ಕರೆ | |
(4) | ತೆರೆದ-ಕೊಕ್ಕಿನ ಕೊಕ್ಕರೆ |
ಸರಿ ಉತ್ತರ
(1) Adjutant ಕೊಕ್ಕರೆ
26. | ಮಾನವ ಶರೀರದ ಈ ಕೆಳಕಂಡ ಎಲುಬುಗಳಲ್ಲಿ ತೋಳಿಗೆ ಸಂಬಂಧಿಸಿದ ಎಲುಬು ಯಾವುದು? | |
(1) | ರೇಡಿಯಸ್ | |
(2) | ಸ್ಟೆರ್ನಮ್ | |
(3) | ಫೀಮರ್ | |
(4) | ಪಟಿಲ್ಲಾ |
ಸರಿ ಉತ್ತರ
(1) ರೇಡಿಯಸ್
27. | ಆಲ್ಬರ್ಟ್ ಐನ್ ಸ್ಟೀನನ ಸಾಪೇಕ್ಷತಾ ಸಾರ್ವತ್ರಿಕ ಸಿದ್ಧಾಂತವು ಪ್ರಾಯೋಗಿಕವಾಗಿ ಸರಿ ಎಂದು ಮೊಟ್ಟ ಮೊದಲಿಗೆ ಈ ಕೆಳಕಂಡ ಅಂಶದಿಂದ ರುಜುವಾತುಗೊಂಡಿತು. | |
(1) | ಸೂರ್ಯಗ್ರಹಣ | |
(2) | ಚಂದ್ರಗ್ರಹಣ | |
(3) | ಆಕಾಶನೌಕೆ (Space Shuttle) | |
(4) | ಸೈಕ್ಲೋಟ್ರಾನ್ |
ಸರಿ ಉತ್ತರ
(1) ಸೂರ್ಯಗ್ರಹಣ
28. | ಭಾರೀ ಗಾತ್ರದ ಸಸ್ಯ | |
(1) | ಅರಳಿಮರ | |
(2) | ಆಲದಮರ | |
(3) | ಹೂಜಿಗಿಡ | |
(4) | ದೈತ್ಯ ಸೆಕೊಯಿಯಾ |
ಸರಿ ಉತ್ತರ
(4) ದೈತ್ಯ ಸೆಕೊಯಿಯಾ
29. | ರಾತ್ರಿಯ ಆಕಾಶದಲ್ಲಿ ಕಾಣುವ ಅತ್ಯಂತ ಪ್ರಖರವಾದ ತಾರೆ | |
(1) | Betelguese | |
(2) | Procyon | |
(3) | Sirius | |
(4) | Vega |
ಸರಿ ಉತ್ತರ
(3) Sirius
30. | ನೀರನ್ನು ತಂಪುಕಾರಕವಾಗಿ (Coolant) ಬಳಸುವ ಕಾರಣವೇನೆಂದರೆ, | |
(1) | ಇದು ಅಧಿಕ ವಿಶಿಷ್ಟ ಉಷ್ಣವನ್ನು ಹೊಂದಿದೆ | |
(2) | ಇದು ಅಧಿಕ ಕುದಿಬಿಂದುವನ್ನು ಹೊಂದಿದೆ | |
(3) | ಇದು ಘನೀಕರಣ ಬಿಂದುವಿನಿಂದ ಕುದಿಯುವ ಬಿಂದುವಿನವರೆಗೆ ಸಾಕಷ್ಟು ದೀರ್ಘವಾದ ಉಷ್ಣಾಂಶ ವ್ಯಾಪ್ತಿಯನ್ನು ಹೊಂದಿದೆ. | |
(4) | ಇದು ಹೆಚ್ಚಿನ ಸಾಂದ್ರತೆ ಹೊಂದಿದೆ. |
ಸರಿ ಉತ್ತರ
(1) ಇದು ಅಧಿಕ ವಿಶಿಷ್ಟ ಉಷ್ಣವನ್ನು ಹೊಂದಿದೆ
31. | ಕೆಳಗಿನ ಯಾವ ಗ್ರಹವು ಅಧಿಕ ಸಂಖ್ಯೆಯ ಸ್ವಾಭಾವಿಕ ಉಪಗ್ರಹಗಳನ್ನು ಅಥವಾ ಚಂದ್ರರನ್ನು ಹೊಂದಿದೆ ? | |
(1) | ಗುರು | |
(2) | ಮಂಗಳ | |
(3) | ಶನಿ | |
(4) | ಶುಕ್ರ |
ಸರಿ ಉತ್ತರ
(1) ಗುರು
32. | ಸುಗಂಧ ದ್ರವ್ಯದ ತೆರೆದ ಶೀಶೆಯನ್ನು ಕೊಠಡಿಯ ಒಂದು ಮೂಲೆಯಲ್ಲಿಟ್ಟರೆ ಇದರ ಸುಗಂಧ ಎಲ್ಲಾ ಕಡೆಯೂ ಹಬ್ಬಿರುತ್ತದೆ. ಯಾವ ವಿದ್ಯಮಾನವು ಇದಕ್ಕೆ ಕಾರಣ ? | |
(1) | ಬಾಷ್ಪೀ ಭವನ | |
(2) | ವಿಸರಣ | |
(3) | ಉತ್ಪತನ | |
(4) | ಕುದಿಯುವಿಕೆ |
ಸರಿ ಉತ್ತರ
(1) ಬಾಷ್ಪೀ ಭವನ
33. | ವಿಶ್ವ ವ್ಯಾಪಾರ ಸಂಸ್ಥೆಯ ಪ್ರಧಾನ ಕಛೇರಿ ಇರುವ ಸ್ಥಳ | |
(1) | ಜಿನೀವಾ | |
(2) | ಮ್ಯಾಡ್ರಿಡ್ | |
(3) | ಲಂಡನ್ | |
(4) | ಪ್ಯಾರಿಸ್ |
ಸರಿ ಉತ್ತರ
(1) ಜಿನೀವಾ
34. | ಹರ್ಷೆಲ್ ಖಗೋಳ ವೀಕ್ಷಣಾಲಯದ ಬೃಹತ್ ಟೆಲಿಸ್ಕೋಪ್ ಹಾಗೂ ಇನ್ ಫ್ರಾರೆಡ್ ಶೋಧಕಾರಕಗಳು ಖಗೋಳದಲ್ಲಿ ಆಮ್ಲಜನಕದ ಅಣುಗಳು ಇರುವುದರ ಬಗ್ಗೆ ಪ್ರಥಮ ದೃಢೀಕೃತ ಮಾಹಿತಿಯನ್ನು ಒದಗಿಸಿದವು. ಈ ಕೆಳಗಿನ ಯಾವ ವರ್ಷದಲ್ಲಿ ಆಮ್ಲಜನಕ ಅನಿಲವನ್ನು ಕಂಡು ಹಿಡಿಯಲಾಯಿತು ? | |
(1) | 1774 | |
(2) | 1974 | |
(3) | 1600 | |
(4) | 1707 |
ಸರಿ ಉತ್ತರ
(1) 1774
35. | ಈ ಕೆಳಗಿನ ಯಾವ ಅನಿಲಗಳ ಜೋಡಿಯು, ಗಣಿಗಳಲ್ಲಿ ಸಂಭವಿಸುವ ಬಹುತೇಕಣ ಸ್ಫೋಟಗಳಿಗೆ ಕಾರಣವಾಗಿದೆ? | |
(1) | ಜಲಜನಕ ಮತ್ತು ಆಮ್ಲಜನಕ | |
(2) | ಆಮ್ಲಜನಕ ಮತ್ತು ಅಸಿಟಲಿನ್ | |
(3) | ಮೀಥೇನ್ ಮತ್ತು ವಾಯು | |
(4) | ಇಂಗಾಲದ ಡಯಾಕ್ಸೈಡ್ ಮತ್ತು ಮೀಥೇನ್ |
ಸರಿ ಉತ್ತರ
(3) ಮೀಥೇನ್ ಮತ್ತು ವಾಯು
36. | ಒಂದು ಬ್ಯಾರೆಲ್ ಎಣ್ಣೆ ಸುಮಾರು ಎಷ್ಟು ಲೀಟರ್ ಗಳಿಗೆ ಸಮ? | |
(1) | 131 ಲೀಟರ್ ಗಳು | |
(2) | 159 ಲೀಟರ್ ಗಳು | |
(3) | 257 ಲೀಟರ್ ಗಳು | |
(4) | 321 ಲೀಟರ್ ಗಳು |
ಸರಿ ಉತ್ತರ
(2) 159 ಲೀಟರ್ ಗಳು
37. | ಸೊಳ್ಳೆಗಳನ್ನು ನಿಯಂತ್ರಿಸುವುದಕ್ಕಾಗಿ ಸಿಹಿ ನೀರಿನ ಕೊಳಗಳು ಮತ್ತು ಬಾವಿಗಳಲ್ಲಿ ಬಿಡುವಂಥ ಜಲಚರ ಯಾವುದು ? | |
(1) | ಏಡಿ | |
(2) | ಡಾಗ್ ಫಿಶ್ | |
(3) | ಗಾಂಬೂಸಿಯಾ ಅಫಿನಿಸ್ | |
(4) | ಬಸವನಹುಳು |
ಸರಿ ಉತ್ತರ
(3) ಗಾಂಬೂಸಿಯಾ ಅಫಿನಿಸ್
38. | ಕಾಳಬೇನೆ (Kala-Azar) ರೋಗದ ರೋಗವಾಹಕ ಯಾವುದು ? | |
(1) | ನೊಣ | |
(2) | ಗುಂಗಾಡು (Sand fly) | |
(3) | ಏಡಿಸ್ ಸೊಳ್ಳೆ | |
(4) | ಅನಾಫಿಲಿಸ್ ಸೊಳ್ಳೆ |
ಸರಿ ಉತ್ತರ
(2) ಗುಂಗಾಡು (Sand fly)
39. | ಸಿತಾರ್ ಮತ್ತು ಕೊಳಲಿನಲ್ಲಿ ಅದೇ ಸ್ವರವನ್ನು ನುಡಿಸಿದಾಗಲೂ ಅವುಗಳಿಂದ ಹೊರಡುವ ನಾದದಲ್ಲಿ ಪರಸ್ಪರ ವ್ಯತ್ಯಾಸವನ್ನು ಗುರುತಿಸಬಹುದಾಗಿದೆ. ಇದಕ್ಕೆ ಕಾರಣ | |
(1) | ಪಿಚ್ ಗಟ್ಟಿಯಾಗಿ ಕೇಳಿಸುವಿಕೆ ಮತ್ತು ಗುಣದಲ್ಲಿರುವ ವ್ಯತ್ಯಾಸ | |
(2) | ಗಟ್ಟಿಯಾಗಿ ಕೇಳಿಸುವಿಕೆಯಲ್ಲಿರುವ ವ್ಯತ್ಯಾಸ ಮಾತ್ರ | |
(3) | ಪಿಚ್ ಮತ್ತು ಗಟ್ಟಿಯಾಗಿ ಕೇಳಿಸುವಿಕೆಯಲ್ಲಿರುವ ವ್ಯತ್ಯಾಸ | |
(4) | ಗುಣದ ವ್ಯತ್ಯಾಸ ಮಾತ್ರ |
ಸರಿ ಉತ್ತರ
(4) ಗುಣದ ವ್ಯತ್ಯಾಸ ಮಾತ್ರ
40. | ಬೇಸಿಗೆಯ ಕಾಲದಲ್ಲಿ ಭಾರತ ಉಪಖಂಡದಲ್ಲಿರುವ ಅಧಿಕ ಉಷ್ಣಾಂಶ ಮತ್ತು ಕೆಳ ಒತ್ತಡಗಳು ಹಿಂದೂ ಮಹಾಸಾಗರದಿಂದ ಗಾಳಿಯನ್ನು ಸೆಳೆಯುತ್ತವೆ. ಇದರಿಂದ ಈ ಕೆಳಕಂಡ ಮಾರುತಗಳು ಬೀಸಿ ಬರುತ್ತವೆ. | |
(1) | ಆಗ್ನೇಯ ಮಾನ್ಸೂನ್ | |
(2) | ನೈರುತ್ಯ ಮಾನ್ಸೂನ್ | |
(3) | ವಾಣಿಜ್ಯ ಮಾರುತಗಳು | |
(4) | ಪಶ್ಚಿಮ ಮಾರುತಗಳು |
ಸರಿ ಉತ್ತರ
(2) ನೈರುತ್ಯ ಮಾನ್ಸೂನ್
41. | ಸಿಮ್ಲಾ ಒಪ್ಪಂದಕ್ಕೆ ಇವರಿಬ್ಬರ ನಡುವೆ ಸಹಿಯಾಯಿತು. | |
(1) | ಅಯೂಬ್ ಖಾನ್ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ | |
(2) | ಇಂದಿರಾ ಗಾಂಧಿ ಮತ್ತು ಜುಲ್ಫೀಕರ್ ಅಲಿ ಭುಟ್ಟೊ | |
(3) | ಇಂದಿರಾಗಾಂಧಿ ಮತ್ತು ಯಾಹ್ಯಾಖಾನ್ | |
(4) | ಇಂದಿರಾಗಾಂಧಿ ಮತ್ತು ಅಯೂಬ್ ಖಾನ್ |
ಸರಿ ಉತ್ತರ
(2) ಇಂದಿರಾ ಗಾಂಧಿ ಮತ್ತು ಜುಲ್ಫೀಕರ್ ಅಲಿ ಭುಟ್ಟೊ
42. | ಇಲ್ಲಿ ಕೆಳಕಂಡ ಅಂಕಿಗಳ ಸರಣಿಯನ್ನು ಕೊಟ್ಟಿದೆ : | |
A 0 B 1 1 1 0 C 11 D 1 | ||
ಇಲ್ಲಿ ಕೆಲವು ಅಂಕಿಗಳಿಗೆ ಬದಲಾಗಿ A, B, C, D ಎಂಬ ಅಕ್ಷರಗಳನ್ನು ಕೊಡಲಾಗಿದೆ. ಕೆಳಗೆ ಕೊಟ್ಟಿರುವ ಯಾವ ಸರಿಯಾದ ಅಂಕಿಗಳ ಸರಣಿಯು ಈ ಅಕ್ಷರಗಳಿಗೆ ಸಂವಾದಿಯಾಗಿದೆ ? | ||
(1) | 0, 0, 0, 1 | |
(2) | 0, 0, 1, 1 | |
(3) | 1, 0, 0, 0 | |
(4) | 0, 1, 0, 1 |
ಸರಿ ಉತ್ತರ
(4) 0, 1, 0, 1
43. | ಈ ಕೆಳಗೆ ಕೊಟ್ಟಿರುವ ಚಿತ್ರದಲ್ಲಿ ಕಾಣೆಯಾಗಿರುವ ಸಂಖ್ಯೆಯನ್ನು ಕಂಡು ಹಿಡಿಯರಿ : | |
(1) | 10 + 16 | |
(2) | 16 + 15 | |
(3) | 10 + 15 | |
(4) | 10 + 24 |
ಸರಿ ಉತ್ತರ
(4) 10 + 24
44. | ಯಾವುದೋ ಒಂದು ಸಂಕೇತದಲ್ಲಿ, ‘WATER’ ಎಂಬುದಕ್ಕೆ 25, 3, 22, 7, 20 ಎಂಬ ಸಂಕೇತವನ್ನು ಮತ್ತು ‘BRICK’ ಎಂಬುದಕ್ಕೆ 4, 20, 11, 5, 13 ಎಂಬ ಸಂಕೇತವನ್ನು ಕೊಡಲಾಗಿದೆ. ಹೀಗಿದ್ದರೆ, ‘KPSC’ ಎಂಬುದಕ್ಕೆ ಸಂಕೇತವನ್ನು ಕೊಡಿ. | |
(1) | 23, 18, 24, 5 | |
(2) | 13, 18, 21, 5 | |
(3) | 13, 19, 21, 5 | |
(4) | 23, 18, 7, 5 |
ಸರಿ ಉತ್ತರ
(2) 13, 18, 21, 5
45. | ಈ ಕೆಳಗಿನ ಯಾವುದು ಆಮ್ಲೀಯ ಸ್ವಭಾವವನ್ನು ಹೊಂದಿದೆ ? | |
(1) | ನಿಂಬೆರಸ | |
(2) | ಮಾನವನ ರಕ್ತ | |
(3) | ಸುಣ್ಣದ ನೀರು | |
(4) | ಅಂಟಾಸಿಡ್ |
ಸರಿ ಉತ್ತರ
(1) ನಿಂಬೆರಸ
46. | ಈ ಕೆಳಗಿನ ಚೌಕಗಳಲ್ಲಿ ಯಾವುದೋ ಒಂದು ನಿಯಮಾನುಸಾರವಾಗಿ ಸಂಖ್ಯೆಗಳನ್ನು ತುಂಬಲಾಗಿದೆ. | |
ಪ್ರಶ್ನಾರ್ಥಕ ಚಿಹ್ನೆ ಇರುವ ಚೌಕದಲ್ಲಿ ಅಳವಡಿಸುವಂಥ ಸರಿಯಾದ ಸಂಖ್ಯೆ ಯಾವುದು ? | ||
(1) | 15 | |
(2) | 14 | |
(3) | 13 | |
(4) | 12 |
ಸರಿ ಉತ್ತರ
(2) 14
47. | ಇಲ್ಲಿ ಸಂಖ್ಯೆಗಳ ಒಂದು ಸರಣಿಯನ್ನು ಕೊಡಲಾಗಿದೆ. 2, 5, 16, 64, 326. ಈ ಸರಣಿಯಲ್ಲಿನ ಒಂದು ಸಂಖ್ಯೆ ಮಾತ್ರ ತಪ್ಪಾಗಿದೆ. ಇಲ್ಲಿರಬೇಕಾದ ಸರಿಯಾದ ಸಂಖ್ಯೆ ಯಾವುದು ? | |
(1) | 6 | |
(2) | 17 | |
(3) | 65 | |
(4) | 327 |
ಸರಿ ಉತ್ತರ
(3) 65
48. | ಸಂಜೆ 4 :10 ಗಂಟೆಯಾಗಿದ್ದಾಗ ಗಡಿಯಾರದ ನಿಮಿಷದ ಮುಳ್ಳು ಮತ್ತು ಗಂಟೆಯ ಮುಳ್ಳುಗಳ ನಡುವೆ ಇರುವ ಕೋನ ಎಷ್ಟು ? | |
(1) | 60° | |
(2) | 65° | |
(3) | 70° | |
(4) | `72 (1°)/2` |
ಸರಿ ಉತ್ತರ
(2) 65°
49. | ಈ ಕೆಳಕಂಡ ಅನುಕ್ರಮಣಿಕೆಯ ಸಾಮಾನ್ಯ ಅನುಪಾತ ಯಾವುದು ? `3/(r^3), 6/(5r), (12r)/(25),( 24r^2)/(125)` _______ | |
(1) | `(2r^2)/(5)` | |
(2) | `(r^2)/(5)` | |
(3) | `(2r^3)/(3)` | |
(4) | `(r)/(5)` |
ಸರಿ ಉತ್ತರ
(1) `(2r^2)/(5)`
50. | ಚೌಕಾಕಾರದ ಕಾಗದವೊಂದನ್ನು ಅಡ್ಡಡ್ಡವಾಗಿ ಎರಡು ಸಲ ಮಡಿಸಲಾಗಿದೆ. ಅನಂತರ ಉದ್ದುದ್ದವಾಗಿ ಎರಡು ಸಲ ಮಡಿಸಲಾಗಿದೆ. ಹೀಗೆ ಮಡಿಸಿದ ಕಾಗದದ ಮೇಲೆ ಒಂದು ರಂಧ್ರವನ್ನು ಮಾಡಲಾಗಿದೆ. ಮಡಿಸಿದ ಕಾಗದವನ್ನು ಬಿಡಿಸಿದಾಗ ಎಷ್ಟು ರಂಧ್ರಗಳನ್ನು ನೋಡಬಹುದು ? | |
(1) | 1 | |
(2) | 8 | |
(3) | 16 | |
(4) | 32 |
ಸರಿ ಉತ್ತರ
(3) 16
51. | ಮಾನವ ಹಕ್ಕುಗಳ ಪ್ರಸಿದ್ಧ ಹೋರಾಟಗಾರ್ತಿ ಆಸ್ಮಾ ಜಹಾಂಗೀರ್ ಯಾವ ದೇಶದವರು ? | |
(1) | ಭಾರತ | |
(2) | ಪಾಕಿಸ್ತಾನ | |
(3) | ಬಾಂಗ್ಲಾ ದೇಶ್ | |
(4) | ಮ್ಯಾನ್ಮಾರ್ (ಬರ್ಮಾ) |
ಸರಿ ಉತ್ತರ
(2) ಪಾಕಿಸ್ತಾನ
52. | ಪ್ರಸ್ತಾಪಿಸಲಾಗಿರುವ ಜೈತಾಪುರ್ ನ್ಯೂಕ್ಲಿಯರ್ ಸ್ಥಾವರವು ಎಲ್ಲಿದೆ ? | |
(1) | ಮಹಾರಾಷ್ಟ್ರದ ಕೊಂಕಣದಲ್ಲಿರುವ ರತ್ನಗಿರಿ-ಸಿಂಧೂದುರ್ಗ ಜಿಲ್ಲೆಗಳು. | |
(2) | ಗೋವಾದ ಪಶ್ಚಿಮಘಟ್ಟಗಳ ಬುಡದಲ್ಲಿರುವ ಗುಡ್ಡಗಳು. | |
(3) | ರಾಜಸ್ಥಾನದ ಬಿಕಾನೇರ್ | |
(4) | ಗುಜರಾತ್ ನ ಆನಂದ್ |
ಸರಿ ಉತ್ತರ
(1) ಮಹಾರಾಷ್ಟ್ರದ ಕೊಂಕಣದಲ್ಲಿರುವ ರತ್ನಗಿರಿ- ಸಿಂಧೂದುರ್ಗ ಜಿಲ್ಲೆಗಳು.
53. | ಈ ಕೆಳಕಂಡ ಕಾರ್ಯಕ್ರಮಕ್ಕಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಗೆ (SKDRDP) ಮೇ 2012 ರಲ್ಲಿ ಹಸಿರು ಆಸ್ಕರ್ ಪ್ರಶಸ್ತಿ ನೀಡಲಾಯಿತು. | |
(1) | ಗ್ರಾಮೀಣ ವಯಸ್ಕರ ಶಿಕ್ಷಣ | |
(2) | ಗ್ರಾಮೀಣ ಬಡ ಮಹಿಳೆಯರ ತರಬೇತಿ | |
(3) | ಸಮುದಾಯ ಅಭಿವೃದ್ಧಿಗಾಗಿ, ನವೀಕರಿಸಬಹುದಾದ ಸ್ಥಿರ ಇಂಧನ ಮೂಲಗಳಿಗೆ ಬೆಂಬಲವಾಗಿ ಸಣ್ಣ ಪ್ರಮಾಣದ ಸಾಲ ನೀಡಿಕೆ | |
(4) | ಗ್ರಾಮೀಣ ಅರಣ್ಯೀಕರಣ ಯೋಜನೆಗಳು |
ಸರಿ ಉತ್ತರ
(3) ಸಮುದಾಯ ಅಭಿವೃದ್ಧಿಗಾಗಿ, ನವೀಕರಿಸಬಹುದಾದ ಸ್ಥಿರ ಇಂಧನ ಮೂಲಗಳಿಗೆ ಬೆಂಬಲವಾಗಿ ಸಣ್ಣ ಪ್ರಮಾಣದ ಸಾಲ ನೀಡಿಕೆ
54. | ‘ಕಿಂಗ್ ಆಫ್ ಕ್ಲೇ ಕೋರ್ಟ್’ ಎಂಬ ಅಡ್ಡ ಹೆಸರು ಪಡೆದಿರುವ ಅಂತರರಾಷ್ಟ್ರೀಯ ಲಾನ್ ಟೆನಿಸ್ ಆಟಗಾರ | |
(1) | ರೋಜರ್ ಫೆಡರರ್ | |
(2) | ರಫೇಲ್ ನಡಾಲ್ | |
(3) | ನೊವಾಕ್ ಜೊಕೊವಿಕ್ | |
(4) | ಮಹೇಶ್ ಭೂಪತಿ |
ಸರಿ ಉತ್ತರ
(2) ರಫೇಲ್ ನಡಾಲ್
55. | ಕೂಡುಂಕುಳಂ ಅಣು ವಿದ್ಯುತ್ ಸ್ಥಾವರವು ____________ ರಾಜ್ಯದಲ್ಲಿದೆ ಮತ್ತು ಇದು ಭಾರತ ಹಾಗೂ ____________ ನಡುವಿನ ಸಹಯೋಗ ಕಾರ್ಯಕ್ರಮವಾಗಿದೆ. | |
(1) | ತಮಿಳುನಾಡು, ರಷ್ಯಾ | |
(2) | ಕೇರಳ, ರಷ್ಯಾ | |
(3) | ತಮಿಳುನಾಡು, ಇರಾನ್ | |
(4) | ಕೇರಳ, ಇರಾನ್ |
ಸರಿ ಉತ್ತರ
(1) ತಮಿಳುನಾಡು, ರಷ್ಯಾ
56. | ನವದೆಹಲಿಯಲ್ಲಿರುವ ರಾಷ್ಟ್ರಪತಿ ಭವನವನ್ನು ಕೆಲವೊಮ್ಮೆ ಹೀಗೂ ಕರೆಯುತ್ತಾರೆ. | |
(1) | ರೈಸಿನಾ ಹಿಲ್ಸ್ | |
(2) | ಬಂಜಾರಾ ಹಿಲ್ಸ್ | |
(3) | ದಿ ಹ್ಯಾಂಗಿಂಗ್ ಗಾರ್ಡನ್ | |
(4) | ವೈಟ್ ಹೌಸ್ |
ಸರಿ ಉತ್ತರ
(1) ರೈಸಿನಾ ಹಿಲ್ಸ್
57. | ಕರ್ನಾಟಕದ ವಿಧಾನಸಭೆಯು 2012ರ ಜೂನ್ 18 ರಂದು ತನ್ನ ____________ ಮಹೋತ್ಸವವನ್ನು ಆಚರಿಸಿತು. | |
(1) | ರಜತ ಮಹೋತ್ಸವ | |
(2) | ಸುವರ್ಣ ಮಹೋತ್ಸವ | |
(3) | ವಜ್ರ ಮಹೋತ್ಸವ | |
(4) | ಪ್ಲಾಟಿನಂ ಮಹೋತ್ಸವ |
ಸರಿ ಉತ್ತರ
(3) ವಜ್ರ ಮಹೋತ್ಸವ
58. | ____________ ದೇಶಕ್ಕೆ ಸೇರಿದ ಲಿಯೋನಲ್ ಮೆಸ್ಸಿಯ ಹೆಸರು ____________ ಆಟಕ್ಕೆ ಸಂಬಂಧಿಸಿದೆ. | |
(1) | ಅರ್ಜೆಂಟೀನಾ, ಸಾಕರ್ | |
(2) | ಬ್ರೆಜಿಲ್, ಸಾಕರ್ | |
(3) | ಫ್ರಾನ್ಸ್, ಲಾನ್ ಟೆನಿಸ್ | |
(4) | ಸ್ವಿಟ್ಜರ್ ಲ್ಯಾಂಡ್, ಲಾನ್ ಟೆನಿಸ್ |
ಸರಿ ಉತ್ತರ
(1) ಅರ್ಜೆಂಟೀನಾ, ಸಾಕರ್
59. | ಭಾರತದ ಈ ಕೆಳಕಂಡ ತಾಣವು 2012 ರಲ್ಲಿ ಯುನೆಸ್ಕೋದ ವಿಶ್ವಪರಂಪರೆಯ ಪಟ್ಟಿಗೆ ಸೇರ್ಪಡೆಗೊಂಡಿತು: | |
(1) | ತಾಜ್ ಮಹಲ್ | |
(2) | ಪಶ್ಚಿಮ ಘಟ್ಟಗಳು | |
(3) | ಕೋವಳಂ ಬೀಚ್ | |
(4) | ಅಜಂತಾ ಮತ್ತು ಎಲ್ಲೋರಾ ಗುಹಾ ದೇವಾಲಯಗಳು |
ಸರಿ ಉತ್ತರ
(2) ಪಶ್ಚಿಮ ಘಟ್ಟಗಳು
60. | ಹಿಗ್ಸ್-ಬೋಸಾನ್ (ದೇವಕಣ) ಎಂದು ಬಳಕೆಯಾಗುತ್ತಿರುವ ಪದದಲ್ಲಿ ‘ಬೋಸಾನ್’ ಎಂಬ ಪದವು ಈ ಕೆಳಕಂಡ ಭಾರತೀಯ ಭೌತ ವಿಜ್ಞಾನಿಯ ಹೆಸರನ್ನು ಆಧರಿಸಿದೆ : | |
(1) | ಜಗದೀಶ್ ಚಂದ್ರ ಬೋಸ್ | |
(2) | ದೇವೇಂದ್ರನಾಥ ಬೋಸ್ | |
(3) | ಮಹೇಂದ್ರನಾಥ ಬೋಸ್ | |
(4) | ಸತ್ಯೇಂದ್ರನಾಥ ಬೋಸ್ |
ಸರಿ ಉತ್ತರ
(4) ಸತ್ಯೇಂದ್ರನಾಥ ಬೋಸ್
61. | ಔಷಧಕ್ಕೆ ಪ್ರತಿರೋಧ ಒಡ್ಡುವ ರೂಪಗಳನ್ನು ಬೆಳೆಸಿಕೊಳ್ಳುವ ಮೂಲಕ ಭಾರತಕ್ಕೆ ಅಗಾಧವಾದ ಭೀತಿಯನ್ನುಂಟು ಮಾಡುತ್ತಿರುವ ರೋಗ: | |
(1) | ಕ್ಷಯ | |
(2) | ಮಕ್ಕಳಿಗೆ ಬರುವ ಪೋಲಿಯೋ | |
(3) | ಏಡ್ಸ್ | |
(4) | ಮಲೇರಿಯಾ |
ಸರಿ ಉತ್ತರ
(1) ಕ್ಷಯ
62. | ನೇತಾಜಿ ಸುಭಾಷ್ ಚಂದ್ರ ಬೋಸರ ಇಂಡಿಯನ್ ನ್ಯಾಷನಲ್ ಆರ್ಮಿ (INA) ಯೊಂದಿಗೆ ಒಡನಾಟ ಹೊಂದಿದ್ದ ಹಾಗೂ 2012 ರ ಜುಲೈನಲ್ಲಿ ನಿಧನರಾದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ್ತಿ | |
(1) | ಕ್ಯಾಪ್ಟನ್ ಲಕ್ಷ್ಮಿ ಸೆಹಗಲ್ | |
(2) | ಕ್ಯಾಪ್ಟನ್ ಸರಸ್ವತಿ ಸೆಹಗಲ್ | |
(3) | ಕ್ಯಾಪ್ಟನ್ ಲೀಲಾಬಾಯಿ | |
(4) | ಕ್ಯಾಪ್ಟನ್ ಗಂಗೆ ಅಮ್ಮಾಳ್ |
ಸರಿ ಉತ್ತರ
(1) ಕ್ಯಾಪ್ಟನ್ ಲಕ್ಷ್ಮಿ ಸೆಹಗಲ್
63. | 2012 ರ ಜುಲೈ ತಿಂಗಳಲ್ಲಿ ಘೋಷಿತವಾದ ಮ್ಯಾಗ್ಸೆಸೆ ಪುರಸ್ಕಾರಗಳನ್ನು ಪಡೆದವರಲ್ಲಿರುವ ಭಾರತೀಯ ವ್ಯಕ್ತಿ | |
(1) | ಎ.ಪಿ.ಜೆ.ಕಲಾಂ | |
(2) | ಸಾಲುಮರದ ತಿಮ್ಮಕ್ಕ | |
(3) | ಕುಳಂದೇಯಿ ಫ್ರಾನ್ಸಿಸ್ | |
(4) | ಅಣ್ಣಾ ಹಜಾರೆ |
ಸರಿ ಉತ್ತರ
(3) ಕುಳಂದೇಯಿ ಫ್ರಾನ್ಸಿಸ್
64. | ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಭಾರತದ ಅಗ್ರಮಾನ್ಯ ಬ್ಯಾಡ್ಮಿಂಟನ್ ಆಟಗಾರ್ತಿ | |
(1) | ಸಾನಿಯಾ ಮಿರ್ಜಾ | |
(2) | ಸೈನಾ ಅಗರ್ ವಾಲ್ | |
(3) | ಪಿಂಕಿ ಪ್ರಮಾಣಿಕ್ | |
(4) | ಸೈನಾ ನೆಹ್ವಾಲ್ |
ಸರಿ ಉತ್ತರ
(4) ಸೈನಾ ನೆಹ್ವಾಲ್
65. | 2012 ರ ಆಗಸ್ಟ್ ತಿಂಗಳಲ್ಲಿ ಯಶಸ್ವಿಯಾಗಿ ಮಂಗಳ ಗ್ರಹದ ಮೇಲಿಳಿದ ನಾಸಾದ (ಯು.ಎಸ್.ಎ) ಮಂಗಳ ವಿಜ್ಞಾನ ಪ್ರಯೋಗಾಲಯಕ್ಕೆ ಯಾವ ಹೆಸರು ಕೊಡಲಾಗಿದೆ ? | |
(1) | ಎಕ್ಸ್ ಪ್ಲೋರರ್ | |
(2) | ಗೇಲ್ | |
(3) | ಕ್ಯೂರಿಯಾಸಿಟಿ | |
(4) | ರೊಬೊಟಿಕ್ ರೋವರ್ |
ಸರಿ ಉತ್ತರ
(3) ಕ್ಯೂರಿಯಾಸಿಟಿ
66. | 2012 ರಲ್ಲಿ ಭಾರತದ ಯಾವ ನಗರದಲ್ಲಿ ಕಸ ವಿಲೇವಾರಿಯು ಒಂದು ಬೃಹತ್ ಸಮಸ್ಯೆಯಾಗಿ ಕಾಣಿಸಿಕೊಂಡಿತು ? | |
(1) | ನವದೆಹಲಿ | |
(2) | ಬೆಂಗಳೂರು | |
(3) | ಚೆನ್ನೈ | |
(4) | ಕೋಲ್ಕತ್ತಾ |
ಸರಿ ಉತ್ತರ
(2) ಬೆಂಗಳೂರು
67. | ಖಾಯಂ ಒಪ್ಪಂದವನ್ನು ಜಾರಿಗೆ ತಂದವರು : | |
(1) | ಲಾರ್ಡ್ ವೆಲ್ಲೆಸ್ಲಿ | |
(2) | ಲಾರ್ಡ್ ಕಾರ್ನ್ ವಾಲೀಸ್ | |
(3) | ಲಾರ್ಡ್ ಹೇಸ್ಟಿಂಗ್ಸ್ | |
(4) | ಲಾರ್ಡ್ ವಿಲಿಯಂ ಬೆಂಟಿಂಕ್ |
ಸರಿ ಉತ್ತರ
(2) ಲಾರ್ಡ್ ಕಾರ್ನ್ ವಾಲೀಸ್
68. | 2012 ರ ಡಿಸೆಂಬರ್ ತಿಂಗಳಲ್ಲಿ ತಮ್ಮ 92 ನೇ ವಯಸ್ಸಿನಲ್ಲಿ ನಿಧನರಾದ ಪಂಡಿತ್ ರವಿಶಂಕರ್ ಅವರು ಯಾವ ವಾದ್ಯದ ನುಡಿಸುವಿಕೆಗೆ ಪ್ರಸಿದ್ಧರಾಗಿದ್ದರು ? | |
(1) | ಕೊಳಲು | |
(2) | ಸಿತಾರ್ | |
(3) | ವೀಣೆ | |
(4) | ಸರೋದ್ |
ಸರಿ ಉತ್ತರ
(2) ಸಿತಾರ್
69. | 2012 ರ ಉತ್ತರಾರ್ಧದಲ್ಲಿ ಭಯೋತ್ಪಾದಕರ ದಾಳಿಯಿಂದ ಬದುಕುಳಿದ ಹಾಗೂ ಹೆಣ್ಣು ಮಕ್ಕಳ ಶಿಕ್ಷಣವನ್ನು ಪ್ರತಿಪಾದಿಸಿದ ಮಲಾಲ ಎಂಬ ಬಾಲಕಿ ಯಾವ ದೇಶದವಳು ? | |
(1) | ಆಫ್ಘಾನಿಸ್ತಾನ | |
(2) | ಬಾಂಗ್ಲಾದೇಶ್ | |
(3) | ಪಾಕಿಸ್ತಾನ | |
(4) | ಮ್ಯಾನ್ಮಾರ್ (ಬರ್ಮಾ) |
ಸರಿ ಉತ್ತರ
(3) ಪಾಕಿಸ್ತಾನ
70. | ಕರ್ನಾಟಕದ ಗಿರೀಶ್ ಎಂಬ ವಿಕಲಚೇತನ ಬಾಲಕ, 2012 ರಲ್ಲಿ ನಡೆದ ಪ್ಯಾರಾ ಒಲಿಂಪಿಕ್ಸ್ ನ ____________ ವಿಭಾಗದಲ್ಲಿ ಅಂತರರಾಷ್ಟ್ರೀಯ ಮನ್ನಣೆ ಗಳಿಸಿದರು. | |
(1) | ಹೈಜಂಪ್ | |
(2) | ಲಾಂಗ್ ಜಂಪ್ | |
(3) | ಪೋಲ್ ವಾಲ್ಟ್ | |
(4) | ಈಜುಗಾರಿಕೆ |
ಸರಿ ಉತ್ತರ
ಈ ಪ್ರಶ್ನೆಗೆ GRACE MARK ನೀಡಲಾಗಿದೆ.
71. | ಈ ಕೆಳಗಿನವುಗಳಲ್ಲಿ ಯಾವುದು ಚಂಡಮಾರುತ ಬಿರುಗಾಳಿಯ ಹೆಸರಲ್ಲ ? | |
(1) | ನೀಲಾ | |
(2) | ಕೊಲವೆರಿ ಡಿ | |
(3) | ಸ್ಯಾಂಡಿ | |
(4) | ಕ್ಯಾಥರೀನಾ |
ಸರಿ ಉತ್ತರ
(2) ಕೊಲವೆರಿ ಡಿ
72. | ಲಂಡನ್ ನಲ್ಲಿ ನಡೆದ 2012 ರ ಒಲಿಂಪಿಕ್ಸ್ ಪಂದ್ಯಗಳಲ್ಲಿ, ಭಾರತದ ಕ್ರೀಡಾಪಟು ಎಂ.ಸಿ.ಮೇರಿಕೋಂ ಅವರು ಯಾವ ವಿಭಾಗದಲ್ಲಿ ಕಂಚಿನ ಪದಕ ಗಳಿಸಿದರು ? | |
(1) | ಧನುರ್ವಿದ್ಯೆ (ಆರ್ಚರಿ) | |
(2) | ಮಲ್ಲಯುದ್ಧ (ರೆಸ್ಲಿಂಗ್) | |
(3) | ಶೂಟಿಂಗ್ | |
(4) | ಮುಷ್ಟಿಕಾಳಗ (ಬಾಕ್ಸಿಂಗ್) |
ಸರಿ ಉತ್ತರ
(4) ಮುಷ್ಟಿಕಾಳಗ (ಬಾಕ್ಸಿಂಗ್)
ಈ ಕೆಳಗಿನ 73 ಮತ್ತು 74 ನೇ ಪ್ರಶ್ನೆಗಳು I ಮತ್ತು II ಎಂಬ ತಲಾ ಎರಡು ವಿವರಣೆಗಳನ್ನು ಹೊಂದಿವೆ. ಕೆಳಕಂಡ ಸಂಕೇತಗಳನ್ನು ಬಳಸಿ ಇವುಗಳಿಗೆ ಉತ್ತರಿಸಿ:
73. | I. | 2013-14ನೇ ವರ್ಷವನ್ನು ಸ್ವಾಮಿ ವಿವೇಕಾನಂದರ ಜನ್ಮ ಶತಮಾನೋತ್ಸವ ವರ್ಷವಾಗಿ ಆಚರಿಸಲಾಗುವುದು. |
II. | ಹೈದ್ರಾಬಾದ್ ಕರ್ನಾಟಕ ಪ್ರದೇಶದ ಹಿಂದುಳಿದ ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನವನ್ನು ನೀಡುವ ಹೈದ್ರಾಬಾದ್ ಕರ್ನಾಟಕ ವಿಧೇಯಕಕ್ಕೆ ಲೋಕಸಭೆಯು 2012ರ ಡಿಸೆಂಬರ್ನಲ್ಲಿ ತನ್ನ ಒಪ್ಪಿಗೆಯನ್ನು ನೀಡಿತು. | |
(1) | ಎರಡೂ ವಿವರಣೆಗಳು ಸರಿ. | |
(2) | I ವಿವರಣೆ ಮಾತ್ರ ಸರಿ | |
(3) | II ವಿವರಣೆ ಮಾತ್ರ ಸರಿ | |
(4) | ಎರಡೂ ವಿವರಣೆಗಳು ತಪ್ಪು |
ಸರಿ ಉತ್ತರ
(3) II ವಿವರಣೆ ಮಾತ್ರ ಸರಿ
74. | I. | ನ್ಯಾಯಮೂರ್ತಿ ಅಲ್ತಾಮಸ್ ಕಬೀರ್ ಅವರು, ಎಸ್.ಎಚ್.ಕಪಾಡಿಯಾ ಅವರ ನಂತರ ಭಾರತದ ಮುಖ್ಯ ನ್ಯಾಯಮೂರ್ತಿಗಳಾಗಿ ಬಂದರು. |
II. | ಶ್ರೀ ಎಚ್.ಆರ್.ಭಾರದ್ವಾಜ್ ಅವರು, ಶ್ರೀ ಜಿ.ಎನ್.ತ್ರಿವೇದಿಯವರ ನಂತರ ಕರ್ನಾಟಕದ ರಾಜ್ಯಪಾಲರಾಗಿ ಬಂದರು. | |
(1) | ಎರಡೂ ವಿವರಣೆಗಳು ಸರಿ. | |
(2) | I ವಿವರಣೆ ಮಾತ್ರ ಸರಿ | |
(3) | II ವಿವರಣೆ ಮಾತ್ರ ಸರಿ | |
(4) | ಎರಡೂ ವಿವರಣೆಗಳು ತಪ್ಪುು |
ಸರಿ ಉತ್ತರ
(2) I ವಿವರಣೆ ಮಾತ್ರ ಸರಿ
75. | ‘‘My Presidential Years’’ ಎಂಬ ಕೃತಿಯನ್ನು ಬರೆದವರು ____________ | |
(1) | ಅಬ್ದುಲ್ ಕಲಾಂ | |
(2) | ಪ್ರತಿಭಾ ಪಾಟೀಲ್ | |
(3) | ಆರ್.ವೆಂಕಟರಾಮನ್ | |
(4) | ಡಾ.ರಾಧಾಕೃಷ್ಣನ್ |
ಸರಿ ಉತ್ತರ
(3) ಆರ್.ವೆಂಕಟರಾಮನ್
76. | ದೇವಾನಂದ್ ಅವರ ಆತ್ಮಕಥೆಯ ಶೀರ್ಷಿಕೆ | |
(1) | ರೋಮಾನ್ಸಿಂಗ್ ವಿತ್ ಲೈಫ್ | |
(2) | ಮೈ ಲೈಫ್ ಇನ್ ಫಿಲ್ಮ್ ವರ್ಲ್ಡ್ | |
(3) | ಜರ್ನಿ ಆಫ್ ಮೈ ಲೈಫ್ | |
(4) | ಟುವರ್ಡ್ಸ್ ದ ಎಂಡ್ |
ಸರಿ ಉತ್ತರ
(1) ರೋಮಾನ್ಸಿಂಗ್ ವಿತ್ ಲೈಫ್
77. | ಯಾವ ದೇಶದ ಅಧ್ಯಕ್ಷರು 1980ರ ದಶಕದಲ್ಲಿ ವಿಶ್ವ ಸಿನೆಮಾ ಕುರಿತಂತೆ ಪುಸ್ತಕ ಬರೆದರು ? | |
(1) | ಅಮೆರಿಕಾ | |
(2) | ಇಂಗ್ಲೆಂಡ್ | |
(3) | ಭಾರತ | |
(4) | ಉತ್ತರ ಕೊರಿಯಾ |
ಸರಿ ಉತ್ತರ
(4) ಉತ್ತರ ಕೊರಿಯಾ
78. | ಭಾರತದಲ್ಲಿ ಕೊಡಲಾಗುವ ಶಾಂತಿಕಾಲದ ಅತ್ಯುನ್ನತ ಶೌರ್ಯಪ್ರಶಸ್ತಿ ಯಾವುದು ? | |
(1) | ಪರಮವೀರಚಕ್ರ | |
(2) | ಅಶೋಕಚಕ್ರ | |
(3) | ಅರ್ಜುನ ಪ್ರಶಸ್ತಿ | |
(4) | ಖೇಲ್ ರತ್ನ |
ಸರಿ ಉತ್ತರ
(2) ಅಶೋಕಚಕ್ರ
79. | 2012 ರ ಡಿಸೆಂಬರ್ ಅವಧಿಯಲ್ಲಿ, ಭಾರತವು ಯಾವ ದೇಶದೊಂದಿಗೆ ಸುಮಾರು 22 ಸಾವಿರ ಕೋಟಿ ರೂ. ಗಳ ರಕ್ಷಣಾ ಒಪ್ಪಂದವನ್ನು ಮಾಡಿ ಕೊಂಡಿತು ? | |
(1) | ಅಮೆರಿಕಾ | |
(2) | ಜಪಾನ್ | |
(3) | ಇಂಗ್ಲೆಂಡ್ | |
(4) | ರಷ್ಯಾ |
ಸರಿ ಉತ್ತರ
(4) ರಷ್ಯಾ
80. | ಕರ್ನಾಟಕ ರಾಜ್ಯದಲ್ಲಿರುವ ಅತಿ ಉದ್ದವಾದ ನದಿ ಯಾವುದು ? | |
(1) | ಶರಾವತಿ | |
(2) | ಕೃಷ್ಣಾ | |
(3) | ತುಂಗಭದ್ರಾ | |
(4) | ಕಾವೇರಿ |
ಸರಿ ಉತ್ತರ
(2) ಕೃಷ್ಣಾ
81. | ಭಾರತದ ಬಿಲ್ ಗೇಟ್ಸ್ ಎಂದು ಯಾರನ್ನು ಕರೆಯಲಾಗುತ್ತಿದೆ ? | |
(1) | ಅಜೀಂ ಪ್ರೇಮ್ ಜೀ | |
(2) | ನಾರಾಯಣಮೂರ್ತಿ | |
(3) | ಮುಖೇಶ್ ಅಂಬಾನಿ | |
(4) | ಅನಿಲ್ ಅಂಬಾನಿ |
ಸರಿ ಉತ್ತರ
(1) ಅಜೀಂ ಪ್ರೇಮ್ ಜೀ
82. | 2010-11 ರ ಸಾಲಿನಲ್ಲಿ ಭಾರತದ ತಲಾ ಆದಾಯ ಎಷ್ಟಿದ್ದಿತು ? | |
(1) | ರೂ.34,000 | |
(2) | ರೂ.54,000 | |
(3) | ರೂ.70,000 | |
(4) | ರೂ. 60,000 |
ಸರಿ ಉತ್ತರ
(2) ರೂ.54,000
83. | ‘‘we make a living by what we get but we make a life by what we give’’ ಎಂದು ಹೇಳಿದವರು. | |
(1) | ಅಬ್ದುಲ್ ಕಲಾಂ | |
(2) | ವಿನ್ ಸ್ಟನ್ ಚರ್ಚಿಲ್ | |
(3) | ಬಟಾರ್ರ್ಂಡ್ ರಸೆಲ್ | |
(4) | ಜಾರ್ಜ್ ಬರ್ನಾರ್ಡ್ ಷಾ |
ಸರಿ ಉತ್ತರ
(2) ವಿನ್ ಸ್ಟನ್ ಚರ್ಚಿಲ್
84. | ಭಾರತರತ್ನ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯ ಮಹಿಳೆ | |
(1) | ಅರುಣಾ ಅಸಫ್ ಅಲಿ | |
(2) | ಇಂದಿರಾ ಗಾಂಧಿ | |
(3) | ಮದರ್ ತೆರೆಸಾ | |
(4) | ಎಂ.ಎಸ್.ಸುಬ್ಬಲಕ್ಷ್ಮಿ |
ಸರಿ ಉತ್ತರ
(2) ಇಂದಿರಾ ಗಾಂಧಿ
85. | ಟಾಬೊ ಮೊನಾಸ್ಟರಿ ಯಾವ ರಾಜ್ಯದಲ್ಲಿದೆ ? | |
(1) | ಉತ್ತರಾಖಂಡ್ | |
(2) | ಹಿಮಾಚಲ ಪ್ರದೇಶ | |
(3) | ಅರುಣಾಚಲ ಪ್ರದೇಶ | |
(4) | ಸಿಕ್ಕಿಂ |
ಸರಿ ಉತ್ತರ
(2) ಹಿಮಾಚಲ ಪ್ರದೇಶ
86. | ಭಾರತದ ಯೋಜನಾ ಆಯೋಗದ ಈಗಿನ ಅಧ್ಯಕ್ಷರು ಯಾರು ? | |
(1) | ಡಾ. ಮನಮೋಹನ್ ಸಿಂಗ್ | |
(2) | ಡಾ. ಮಾಂಟೆಕ್ ಸಿಂಗ್ ಅಹ್ಲುವಾಲಿಯಾ | |
(3) | ಚಿದಂಬರಂ | |
(4) | ಪ್ರಣಬ್ ಮುಖರ್ಜಿ |
ಸರಿ ಉತ್ತರ
(1) ಡಾ. ಮನಮೋಹನ್ ಸಿಂಗ್
87. | ಭಾರತದ ಹೊರಗೆ ಶಾಖೆಯನ್ನು ಆರಂಭಿಸಿದ ಮೊದಲ ಭಾರತೀಯ ಬ್ಯಾಂಕು | |
(1) | ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ | |
(2) | ಬ್ಯಾಂಕ್ ಆಫ್ ಇಂಡಿಯಾ | |
(3) | ದಿ ಪಂಜಾಬ್ ನ್ಯಾಷನಲ್ ಬ್ಯಾಂಕ್ | |
(4) | ಕೆನರಾ ಬ್ಯಾಂಕ್ |
ಸರಿ ಉತ್ತರ
(2) ಬ್ಯಾಂಕ್ ಆಫ್ ಇಂಡಿಯಾ
88. | ಭಾರತದಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ದಳದಿಂದ ರಕ್ಷಣೆಯನ್ನು ಪಡೆದುಕೊಂಡ ಮೊದಲ ಖಾಸಗಿ ಕಂಪೆನಿ ಯಾವುದು ? | |
(1) | ರಿಲಯನ್ಸ್ ಇಂಡಸ್ಟ್ರೀಸ್ | |
(2) | ಇನ್ಫೋಸಿಸ್ ಟೆಕ್ನಾಲಜೀಸ್ ಲಿಮಿಟೆಡ್ | |
(3) | ಟಾಟಾ ಮೋಟಾರ್ಸ್ | |
(4) | ಎಂ.ಆರ್.ಎಫ್ ಲಿಮಿಟೆಡ್ |
ಸರಿ ಉತ್ತರ
(2) ಇನ್ಫೋಸಿಸ್ ಟೆಕ್ನಾಲಜೀಸ್ ಲಿಮಿಟೆಡ್
89. | ಕರ್ನಾಟಕ ರಾಜ್ಯದಲ್ಲಿ ಎಷ್ಟು ಜಿಲ್ಲೆಗಳಿವೆ ? | |
(1) | 27 | |
(2) | 28 | |
(3) | 30 | |
(4) | 29 |
ಸರಿ ಉತ್ತರ
(3) 30
90. | ವಿಷ್ಣು ಪ್ರಯಾಗ ಜಲವಿದ್ಯುತ್ ಶಕ್ತಿ ಪರಿಯೋಜನೆ ಎಲ್ಲಿದೆ ? | |
(1) | ಹಿಮಾಚಲ ಪ್ರದೇಶ | |
(2) | ಛತ್ತೀಸ್ ಘರ್ | |
(3) | ಮಧ್ಯಪ್ರದೇಶ | |
(4) | ಉತ್ತರಾಖಂಡ್ |
ಸರಿ ಉತ್ತರ
(4) ಉತ್ತರಾಖಂಡ್
91. | ‘‘ಮಾರುಕಟ್ಟೆ ನಿಬಂಧನೆ” ಗಳನ್ನು ಜಾರಿಗೆ ತಂದವರು | |
(1) | ಅಲ್ಲಾ ಉದ್ದೀನ್ ಖಿಲ್ಜಿ | |
(2) | ಮೊಹಮದ್ ಬಿನ್ ತುಘಲಕ್ | |
(3) | ಬಲ್ಬನ್ | |
(4) | ಫೀರೋಜ್ ಷಾ ತುಘಲಕ್ |
ಸರಿ ಉತ್ತರ
(1) ಅಲ್ಲಾ ಉದ್ದೀನ್ ಖಿಲ್ಜಿ
92. | ಕನ್ನಡದ ಮೊದಲ ಶಿಲಾಶಾಸನವಾಗಿರುವ ಹಲ್ಮಿಡಿ ಶಾಸನವನ್ನು ಯಾವ ಜಿಲ್ಲೆಯಲ್ಲಿ ಕಂಡು ಹಿಡಿಯಲಾಯಿತು? | |
(1) | ಹಾಸನ | |
(2) | ಚಿಕ್ಕಮಗಳೂರು | |
(3) | ಶಿವಮೊಗ್ಗ | |
(4) | ಮಂಡ್ಯ |
ಸರಿ ಉತ್ತರ
(1) ಹಾಸನ
93. | ವೆಲ್ಲೆಸ್ಲಿಯ ಪೂರಕ ಮೈತ್ರಿಕೂಟ (Subsidiary Alliance)ವು ಯಾವ ಉದ್ದೇಶ ಹೊಂದಿತ್ತು ? | |
(1) | ಭಾರತದಲ್ಲಿ ಬ್ರಿಟಿಷ್ ವ್ಯಾಪಾರದ ವಿಸ್ತರಣೆ | |
(2) | ಭಾರತದ ರಾಜರುಗಳನ್ನು ಬ್ರಿಟಿಷ್ ನಿಯಂತ್ರಣಕ್ಕೆ ಒಳಪಡಿಸುವುದು. | |
(3) | ಫ್ರೆಂಚ್ ರೊಂದಿಗೆ ಯುದ್ಧವನ್ನು ಕೊನೆಗಾಣಿಸುವುದು | |
(4) | ಮರಾಠರು ಹಾಗೂ ಫ್ರೆಂಚರೊಂದಿಗೆ ಮೈತ್ರಿಯನ್ನು ಸಾಧಿಸುವುದು. |
ಸರಿ ಉತ್ತರ
(2) ಭಾರತದ ರಾಜರುಗಳನ್ನು ಬ್ರಿಟಿಷ್ ನಿಯಂತ್ರಣಕ್ಕೆ ಒಳಪಡಿಸುವುದು.
94. | ‘ಮತ್ತವಿಲಾಸ ಪ್ರಹಸನ’ವನ್ನು ರಚಿಸಿದವರು | |
(1) | ನರಸಿಂಹವರ್ಮನ್ I | |
(2) | ಮಹೇಂದ್ರವರ್ಮನ್ I | |
(3) | ಪರಮೇಶ್ವರವರ್ಮನ್ | |
(4) | ನಂದಿವರ್ಮನ್ |
ಸರಿ ಉತ್ತರ
(2) ಮಹೇಂದ್ರವರ್ಮನ್ I
95. | ‘ಲಾಖ್ಬಕ್ಷ್’ ಎಂಬುದು ಈ ಕೆಳಕಂಡವನಿಗಿದ್ದ ಬಿರುದು | |
(1) | ಕುತುಬುದ್ದೀನ್ ಐಬಕ್ | |
(2) | ಇಲ್ತಮಿಷ್ | |
(3) | ಅಲ್ಲಾಉದ್ದೀನ್ ಖಿಲ್ಜಿ | |
(4) | ಫಿರೋಜ್ ಷಾ |
ಸರಿ ಉತ್ತರ
(1) ಕುತುಬುದ್ದೀನ್ ಐಬಕ್
96. | ಬೀದರ್ನಲ್ಲಿರುವ ಪ್ರಸಿದ್ಧ ಮದರಸಾವನ್ನು ನಿರ್ಮಿಸಿದವರು | |
(1) | ಮಹಮದ್ ಗವಾನ್ | |
(2) | ಮಹಮದ್ ಷಾ | |
(3) | ಇಬ್ರಾಹಿಂ II | |
(4) | ಮಹಮದ್ ಅದಿಲ್ ಷಾ |
ಸರಿ ಉತ್ತರ
(1) ಮಹಮದ್ ಗವಾನ್
97. | ‘ಕೋಟೆಕೋಲಾಹಲ’ ಎಂಬ ಬಿರುದನ್ನು ಪಡೆದಿದ್ದ ಕೆಳದಿಯ ಅರಸ | |
(1) | ಸದಾಶಿವ ನಾಯಕ | |
(2) | ವೆಂಕಟಪ್ಪ ನಾಯಕ | |
(3) | ವೀರಭದ್ರ ನಾಯಕ | |
(4) | ಸೋಮಶೇಖರ ನಾಯಕ |
ಸರಿ ಉತ್ತರ
(1) ಸದಾಶಿವ ನಾಯಕ
98. | ದತ್ತುಮಕ್ಕಳಿಗೆ ಹಕ್ಕಿಲ್ಲ ಎಂಬ ಕಾನೂನನ್ನು ಜಾರಿಗೆ ತಂದವರು | |
(1) | ಲಾರ್ಡ್ ಡಾಲ್ ಹೌಸಿ | |
(2) | ಲಾರ್ಡ್ ಕಾರ್ನ್ವಾಲೀಸ್ | |
(3) | ಲಾರ್ಡ್ ವೆಲ್ಲೆಸ್ಲಿ | |
(4) | ಸರ್ ಜಾನ್ ಶೋರ್ |
ಸರಿ ಉತ್ತರ
(1) ಲಾರ್ಡ್ ಡಾಲ್ ಹೌಸಿ
99. | ಗಾಂಧಿಯವರು ದಂಡಿಯಾತ್ರೆಯನ್ನು ನಡೆಸಿದ ವರ್ಷ | |
(1) | ಏಪ್ರಿಲ್ 1931 | |
(2) | ಜನವರಿ 1929 | |
(3) | ಮಾರ್ಚ್ 1930 | |
(4) | ಮೇ 1933 |
ಸರಿ ಉತ್ತರ
(3) ಮಾರ್ಚ್ 1930
100. | ತನ್ನ ಪ್ರಜೆಗಳ ನೈತಿಕ ಬದುಕನ್ನು ಸುಧಾರಿಸುವುದಕ್ಕಾಗಿ ಅಶೋಕನು ____________ ರನ್ನು ನೇಮಕ ಮಾಡಿದ. | |
(1) | ಧರ್ಮಪಾಲರು | |
(2) | ಅಮಾತ್ಯರು | |
(3) | ಧರ್ಮಾಧಿಕರಣರು | |
(4) | ಧರ್ಮ ಮಹಾಮಾತ್ರರು |
ಸರಿ ಉತ್ತರ
(4) ಧರ್ಮ ಮಹಾಮಾತ್ರರು
ಇಲ್ಲಿ ನೀಡಲಾಗಿರುವ ಉತ್ತರಗಳು KPSC ಯು ಪ್ರಕಟಿಸಿದ್ದಾಗಿರುತ್ತದೆ
0 Comments