FDA-2019 Paper-2 General KANNADA Questions with answers
ದಿನಾಂಕ 09.06.2019 ರಂದು ಕರ್ನಾಟಕ ಲೋಕಸೇವಾ ಆಯೋಗವು ನಡೆಸಿದ ಪ್ರಥಮ ದರ್ಜೆ ಸಹಾಯಕ [ಎಫ್.ಡಿ.ಎ.] ಸಾಮಾನ್ಯ ಕನ್ನಡ ಪತ್ರಿಕೆ - II (ವಿಷಯ ಸಂಕೇತ: 367)ರ ಪ್ರಶ್ನೆಗಳನ್ನು ಉತ್ತರದೊಂದಿಗೆ ಇಲ್ಲಿ ನೀಡಲಾಗಿದೆ.
ಸೂಚನೆಗಳು : ಕೆಳಗಿನ ಪದಗಳಿಗೆ (ಪ್ರಶ್ನೆ ಸಂಖ್ಯೆ 1 - 9) ಅವುಗಳ ಮುಂದೆ ಸೂಚಿಸಿದ ಪರ್ಯಾಯ ರೂಪಗಳಲ್ಲಿ ಸಮಾನಾರ್ಥಕವಾದ ಅಥವಾ ಅತಿ ಸಮೀಪದ ಅರ್ಥವುಳ್ಳ ರೂಪವನ್ನು ಗುರ್ತಿಸಿ.
ಉದಾಹರಣೆ: | ||
ಮೀನ್ ಎಂದರೆ | ||
(1) | ಹೊಳೆಯುವ | |
(2) | ಮೀಯು | |
(3) | ಮೇಯು | |
(4) | ಆಕಾಶ | |
ಇಲ್ಲಿ ‘‘ಹೊಳೆಯುವ’’ ಎಂಬುದು ‘‘ಮೀನ್’ನ ಅರ್ಥವನ್ನು ಹೇಳುವ ಪದ ಆದುದರಿಂದ (1) ನ್ನು ಗುರುತಿಸಬೇಕು. |
1. | ತಸ್ಕರ ಎಂದರೆ | |
(1) | ಭಾಸ್ಕರ | |
(2) | ಕಳ್ಳ | |
(3) | ದಿವಾಕರ | |
(4) | ತಕಲಿ |
ಸರಿ ಉತ್ತರ
(2) ಕಳ್ಳ
2. | ಹಳು ಎಂದರೆ | |
(1) | ಅಳು | |
(2) | ರೋದಿಸು | |
(3) | ಕಾಡು | |
(4) | ಆಲಾಪ |
ಸರಿ ಉತ್ತರ
(3) ಕಾಡು
3. | ಕೋಮಣ, ಇದರ ಸಮಾನಾರ್ಥಕ ಪದಗಳು | |
(1) | ತೋರಣ, ಕಲ್ಯಾಣ | |
(2) | ಲಂಗೋಟಿ, ಕೌಪೀನ | |
(3) | ಕೌಪೀನ, ತೋರಣ | |
(4) | ಕಲ್ಯಾಣ, ಲಂಗೋಟಿ |
ಸರಿ ಉತ್ತರ
(2) ಲಂಗೋಟಿ, ಕೌಪೀನ
4. | ದೂರ್ವೆ ಇದರ ಸಮಾನಾರ್ಥಕ ಪದ | |
(1) | ಹರಟೆ | |
(2) | ಭಯ | |
(3) | ಹಸು | |
(4) | ಗರಿಕೆ |
ಸರಿ ಉತ್ತರ
(4) ಗರಿಕೆ
5. | ದ್ವಿರದ ಎಂದರೆ | |
(1) | ಆನೆ | |
(2) | ಕರಡಿ | |
(3) | ನರಿ | |
(4) | ಜಿಂಕೆ |
ಸರಿ ಉತ್ತರ
(1) ಆನೆ
6. | ಪಂಜ ಎಂದರೆ | |
(1) | ಪಂಜು | |
(2) | ಪಂಚೆ | |
(3) | ಹುಲಿಯ ಅಂಗಾಲು | |
(4) | ಪಂದ್ಯ |
ಸರಿ ಉತ್ತರ
(3) ಹುಲಿಯ ಅಂಗಾಲು
7. | ಪಲ್ವಲ ಎಂದರೆ | |
(1) | ಪಲ್ಲವ | |
(2) | ಪಲ್ಲಟ | |
(3) | ಕೊಳ | |
(4) | ಮೇಲಿನ ಯಾವುದೂ ಅಲ್ಲ |
ಸರಿ ಉತ್ತರ
(3) ಕೊಳ
8. | ಗೋಸಾಯಿ ಇದರ ಸಮಾನಾರ್ಥಕ ಪದ | |
(1) | ಗೋಶಾಲೆ | |
(2) | ಸನ್ಯಾಸಿ | |
(3) | ಗೋರಕ್ಷಕ | |
(4) | ಸೇವಕಿ |
ಸರಿ ಉತ್ತರ
(2) ಸನ್ಯಾಸಿ
9. | ಪಾಷಾಣ ಎಂಬುದರ ಸಮಾನಾರ್ಥ | |
(1) | ಹಗ್ಗ | |
(2) | ಪಾಯಸ | |
(3) | ಹರಿಶಿಣ | |
(4) | ಕಲ್ಲು |
ಸರಿ ಉತ್ತರ
(4) ಕಲ್ಲು
ಸೂಚನೆಗಳು : ಕೆಳಗೆ ಕೊಟ್ಟಿರುವ ಪದಗಳಿಗೆ (ಪ್ರಶ್ನೆ ಸಂಖ್ಯೆ 10 - 17) ವಿರುದ್ಧಾರ್ಥಕ ಪದಗಳನ್ನು ಮುಂದೆ ಕೊಟ್ಟಿರುವ ಪರ್ಯಾಯ ರೂಪಗಳಿಂದ ಗುರ್ತಿಸಿ.
ಉದಾಹರಣೆ : | ||
ತೆಂಕಣ | ||
(1) | ಮೂಡಣ | |
(2) | ಬಡಗಣ | |
(3) | ಪಡುವಣ | |
(4) | ತೆಗಣ | |
ಇಲ್ಲಿ ‘‘ತೆಂಕಣ’’ ಪದಕ್ಕೆ ವಿರುದ್ಧಾರ್ಥಕ ರೂಪ ‘‘ಬಡಗಣ’’ ಎಂಬುದು (2) ನ್ನು ಗುರುತಿಸಬಹುದು. |
10. | ಸುವಿಖ್ಯಾತಿ | |
(1) | ಸುಪ್ರಸಿದ್ದ | |
(2) | ಕುವಿಖ್ಯಾತಿ | |
(3) | ಅಪ್ರಸಿದ್ಧ | |
(4) | ಪ್ರಸಿದ್ಧ |
ಸರಿ ಉತ್ತರ
(2) ಕುವಿಖ್ಯಾತಿ
11. | ಆಸ್ತಿಕ | |
(1) | ನಾಸ್ತಿಕ | |
(2) | ನಾಸಿಕ | |
(3) | ಧಾರ್ಮಿಕ | |
(4) | ಸಿರಿವಂತ |
ಸರಿ ಉತ್ತರ
(1) ನಾಸ್ತಿಕ
12. | ಜಾತ | |
(1) | ವಿಜಾತ | |
(2) | ಹುಟ್ಟು | |
(3) | ಅಜಾತ | |
(4) | ಸಾವು |
ಸರಿ ಉತ್ತರ
(3) ಅಜಾತ
13. | ಮತ್ಸರ | |
(1) | ಹೊಟ್ಟೆಕಿಚ್ಚು | |
(2) | ಅಮತ್ಸರ | |
(3) | ದುರ್ಮತ್ಸರ | |
(4) | ನಿರ್ಮತ್ಸರ |
ಸರಿ ಉತ್ತರ
(4) ನಿರ್ಮತ್ಸರ
14. | ಸಂಧ್ಯಾಕಾಲ | |
(1) | ಮಧ್ಯಾಹ್ನ | |
(2) | ಪ್ರಾತಃಕಾಲ | |
(3) | ರಾತ್ರಿಕಾಲ | |
(4) | ಒಳ್ಳೆಯ ಕಾಲ |
ಸರಿ ಉತ್ತರ
(2) ಪ್ರಾತಃಕಾಲ
15. | ಕೃತಜ್ಞ | |
(1) | ಅಕೃತಜ್ಞ | |
(2) | ಸರ್ವಜ್ಞ | |
(3) | ಕೃತಘ್ನ | |
(4) | ಉಪಕಾರಿ |
ಸರಿ ಉತ್ತರ
(3) ಕೃತಘ್ನ
16. | ದುರ್ಬಲ | |
(1) | ಸಬಲ | |
(2) | ಅಬಲ | |
(3) | ಬಲ | |
(4) | ನಿರ್ಬಲ |
ಸರಿ ಉತ್ತರ
(1) ಸಬಲ
17. | ಮಾನವ | |
(1) | ನರ | |
(2) | ಅಮಾನವ | |
(3) | ಕ್ರೂರಿ | |
(4) | ದಾನವ |
ಸರಿ ಉತ್ತರ
(4) ದಾನವ
ಸೂಚನೆಗಳು : ಈ ಕೆಳಗೆ ಕೆಲವು ಕನ್ನಡದ ನುಡಿಗಟ್ಟುಗಳನ್ನು (ಪ್ರಶ್ನೆ ಸಂಖ್ಯೆ 18 - 22) ಅವುಗಳ ಮುಂದೆ ನಾಲ್ಕು ಪರ್ಯಾಯ ರೂಪಗಳನ್ನು ನೀಡಿದೆ. ನುಡಿಗಟ್ಟಿನ ಅರ್ಥವನ್ನು ವಿವರಿಸುವ ರೂಪವನ್ನು ಆಯ್ಕೆಮಾಡಿ ಗುರುತಿಸಿ.
ಉದಾಹರಣೆ : | ||
‘‘ಬೆಣ್ಣೆ ಹಚ್ಚು’’ | ||
(1) | ರೊಟ್ಟಿಗೆ ಬೆಣ್ಣೆ ಹಚ್ಚು | |
(2) | ಮೈಯುಜ್ಜುವುದು | |
(3) | ಹೊಗಳುವುದು | |
(4) | ಸೇವೆ ಮಾಡುವುದು | |
ಇಲ್ಲಿ ‘‘ಹೊಗಳುವುದು’’. ಸರಿಯಾದ ಅರ್ಥ ಆದುದರಿಂದ (3) ನ್ನು ಗುರುತಿಸಬೇಕು. |
18. | ‘ಗಾಳಿಗೆ ತೂರು’ | |
(1) | ರಾಶಿ ಮಾಡು | |
(2) | ಕೈ ಬಿಡು | |
(3) | ತಿರಸ್ಕರಿಸು | |
(4) | ಹೊರಹಾಕು |
ಸರಿ ಉತ್ತರ
(3) ತಿರಸ್ಕರಿಸು
19. | ‘ಕೆಂಡಕಾರು’ | |
(1) | ಮೋಸ ಮಾಡು | |
(2) | ಹೊಟ್ಟೆಕಿಚ್ಚು ಪಡು | |
(3) | ಬೆಂಕಿಗೆ ಹಾಕು | |
(4) | ಸಿಟ್ಟಾಗು |
ಸರಿ ಉತ್ತರ
(4) ಸಿಟ್ಟಾಗು
20. | ಮೂಗು ದಾರ ತೊಡಿಸು | |
(1) | ವಿರೂಪಗೊಳಿಸು | |
(2) | ಮುದ್ದುಮಾಡು | |
(3) | ಹತೋಟಿಯಲ್ಲಿ ಇಡು | |
(4) | ಮತ್ತೊಬ್ಬರ ರಕ್ಷಣೆಯಲ್ಲಿರು |
ಸರಿ ಉತ್ತರ
(3) ಹತೋಟಿಯಲ್ಲಿ ಇಡು
21. | ‘‘ಏತಿ ಎಂದರೆ ಪ್ರೇತಿಯನ್ನು’’ ನುಡಿಗಟ್ಟಿನ ಅರ್ಥ | |
(1) | ಹೇಳಿದ್ದಕ್ಕೆ ವಿರುದ್ಧವಾಗಿ ಹೇಳು | |
(2) | ಕೈಬಿಡು | |
(3) | ನೆಪ ಮಾತ್ರಕ್ಕೆ ಊಟ ಮಾಡು | |
(4) | ಪ್ರಸಿದ್ದವಾಗಿರುವ |
ಸರಿ ಉತ್ತರ
(1) ಹೇಳಿದ್ದಕ್ಕೆ ವಿರುದ್ಧವಾಗಿ ಹೇಳು
22. | ಸೆರಗಿನಲ್ಲಿ ಗಂಟು ಹಾಕಿಕೊಳ್ಳು - ನುಡಿಗಟ್ಟಿನ ಅರ್ಥ | |
(1) | ಜ್ಞಾಪಕದಲ್ಲಿಟ್ಟುಕೊಳ್ಳುವ | |
(2) | ಪ್ರೀತಿಯಿಂದ ಇರು | |
(3) | ಯಜಮಾನಿಕೆ ನಡೆಸು | |
(4) | ಸ್ವಾವಲಂಬಿಯಾಗುವಂತೆ |
ಸರಿ ಉತ್ತರ
(1) ಜ್ಞಾಪಕದಲ್ಲಿಟ್ಟುಕೊಳ್ಳುವ
ಸೂಚನೆಗಳು : ಕೆಳಗಿನ ವಾಕ್ಯಗಳಲ್ಲಿ (ಪ್ರಶ್ನೆ ಸಂಖ್ಯೆ 23 - 27) ಗೆರೆ ಎಳೆದ ಭಾಗದಲ್ಲಿ ಕೊಡಲಾದ ಇಂಗ್ಲೀಷ್ ರೂಪಕ್ಕೆ ಪರ್ಯಾಯವಾಗಿ ನಾಲ್ಕು ಕನ್ನಡ ರೂಪಗಳನ್ನು ನೀಡಲಾಗಿದೆ. ಅವುಗಳಲ್ಲಿ ಸೂಕ್ತವಾದುದನ್ನು ಗುರುತಿಸಿ.
ಉದಾಹರಣೆ: | ||
ಹೆದ್ದಾರಿಯಲ್ಲಿ ಕಾರೊಂದು ಆಕ್ಸಿಡೆಂಟ್ ಗೊಳಗಾಯಿತು. | ||
(1) | ಪ್ರಮಾದ | |
(2) | ಅಪಘಾತ | |
(3) | ವಿಪತ್ತು | |
(4) | ಅಕಸ್ಮಾತ್ | |
ಇಲ್ಲಿ ‘‘ಅಪಘಾತ’’ ಎಂಬುದು ಸೂಕ್ತ ರೂಪವಾದುದರಿಂದ (2) ನ್ನು ಗುರುತಿಸಬೇಕು. |
23. | ಇತ್ತಿತ್ತಲಾಗಿ ಸೋಷಿಯಲ್ ಮೀಡಿಯಾಗಳು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಲಿವೆ. | |
(1) | ಸಾಮಾಜಿಕ ಮಾಧ್ಯಮಗಳು | |
(2) | ಸಮಾಜ ಸೇವಾ ಸಂಸ್ಥೆಗಳು | |
(3) | ಸಾಮಾಜಿಕ ಪತ್ರಿಕೆಗಳು | |
(4) | ಸಾಮಾಜಿಕ ಸಂಘಟನೆಗಳು |
ಸರಿ ಉತ್ತರ
(1) ಸಾಮಾಜಿಕ ಮಾಧ್ಯಮಗಳು
24. | ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಗೆ ಆಗಮಿಸಿದ ಅತಿಥಿಗಳು ತುಂಬ ‘ಅಥೆಂಟಿಕ್’ ಆಗಿ ಮಾತನಾಡಿದರು. | |
(1) | ಅಧಿಕೃತವಾಗಿ | |
(2) | ಸರಳವಾಗಿ | |
(3) | ಸುಲಲಿತವಾಗಿ | |
(4) | ಚೆನ್ನಾಗಿ |
ಸರಿ ಉತ್ತರ
(1) ಅಧಿಕೃತವಾ
25. | ಮುಖ್ಯಮಂತ್ರಿಗಳು ಬರಗಾಲ ಕಾಮಗಾರಿಯನ್ನು ಕುರಿತು ಸೆಕ್ರೆಟರಿಯೆಟ್ ಸ್ಟಾಫ್ ನ್ನು ಉದ್ದೇಶಿಸಿ ಮಾತನಾಡಿದರು. | |
(1) | ರಹಸ್ಯ ಕಾರ್ಯದರ್ಶಿ ಸಿಬ್ಬಂದಿ | |
(2) | ಸಚಿವಾಲಯದ ಸಿಬ್ಬಂದಿ | |
(3) | ಆಪ್ತ ಸಿಬ್ಬಂದಿ | |
(4) | ಕಾರ್ಯಕ್ರಮ ಕಾರ್ಯದರ್ಶಿ ಸಿಬ್ಬಂದಿ |
ಸರಿ ಉತ್ತರ
(2) ಸಚಿವಾಲಯದ ಸಿಬ್ಬಂದಿ
26. | ಹೊಸದಾದ ಕನ್ನಡ ಚಿತ್ರದ ರಿವ್ಯೂ ನೋಡಿದೆ ಚೆನ್ನಾಗಿದೆ. | |
(1) | ಅನಿಸಿಕೆ | |
(2) | ವಿಮರ್ಶೆ | |
(3) | ಟೀಕೆ | |
(4) | ಹೊರನೋಟ |
ಸರಿ ಉತ್ತರ
(2) ವಿಮರ್ಶೆ
27. | ವಿಷಯ ತಜ್ಞರ ಸಮಿತಿ ಸೇರಿ ಟೆಕ್ಸ್ಟ್ ಬುಕ್ ಸಿದ್ದಪಡಿಸಿದೆ. | |
(1) | ಪರೀಕ್ಷಾ ಪುಸ್ತಕ | |
(2) | ಪಠ್ಯ ಪುಸ್ತಕ | |
(3) | ಪರಿಚಯ ಪುಸ್ತಕ | |
(4) | ಪಠ್ಯ ಕ್ರಮ |
ಸರಿ ಉತ್ತರ
(2) ಪಠ್ಯ ಪುಸ್ತಕ
ಸೂಚನೆಗಳು: ಈ ಕೆಳಗೆ ಕೊಟ್ಟ ಶಬ್ದಗಳಲ್ಲಿ (ಪ್ರಶ್ನೆ ಸಂಖ್ಯೆ 28 - 32) ಒಂದು ಪದ ಉಳಿದವುಗಳ ಗುಂಪಿಗೆ ಸೇರುವುದಿಲ್ಲ. ಅಂತಹ ಪದ ಗುರುತಿಸಿ.
ಉದಾಹರಣೆ : | ||
(1) | ಹುಡುಗಿ | |
(2) | ನವಿಲು | |
(3) | ಗಿಳಿ | |
(4) | ಕಿತ್ತಳೆ | |
ಇಲ್ಲಿ ‘‘ಕಿತ್ತಳೆ’’ ಇತರ ಪದಗಳ ಜಾತಿಗೆ ಸೇರುವುದಿಲ್ಲ ಆದುದರಿಂದ (4) ನ್ನು ಗುರುತಿಸಬೇಕು. |
28. | (1) | ಸೂರ್ಯ |
(2) | ಶಶಿ | |
(3) | ಇನ | |
(4) | ಭಾಸ್ಕರ |
ಸರಿ ಉತ್ತರ
(2) ಶಶಿ
29. | (1) | ಶ್ರೀರಾಮಾಯಣ ದರ್ಶನಂ |
(2) | ಮೂಕಜ್ಜಿಯ ಕನಸುಗಳು | |
(3) | ಭಾರತ ಸಿಂಧುರಶ್ಮಿ | |
(4) | ಕವಿರಾಜಮಾರ್ಗ |
ಸರಿ ಉತ್ತರ
(4) ಕವಿರಾಜಮಾರ್ಗ
30. | (1) | ಗೊಟ್ಟಿ |
(2) | ಸನ್ನೆ | |
(3) | ಬೇಸಿಗೆ | |
(4) | ಕುಠಾರ |
ಸರಿ ಉತ್ತರ
(4) ಕುಠಾರ
31. | (1) | ನಾನು |
(2) | ನೀನು | |
(3) | ಅವನು | |
(4) | ಯಾರು |
ಸರಿ ಉತ್ತರ
(4) ಯಾರು
32. | (1) | ಕಿಲಕಿಲ |
(2) | ಜುಳುಜುಳು | |
(3) | ಅಬ್ಬಬ್ಬಾ | |
(4) | ರಪರಪ |
ಸರಿ ಉತ್ತರ
(3) ಅಬ್ಬಬ್ಬಾ
ಸೂಚನೆಗಳು: ಕೆಳಗಿನ ವಾಕ್ಯಗಳಲ್ಲಿ ಗೆರೆ ಹಾಕಿ ಸೂಚಿಸಿದ ಭಾಗ ತಪ್ಪಾಗಿದ್ದರೆ ಮುಂದೆ ಕೊಡಲಾದ ಮೂರು ಪರ್ಯಾಯ ರೂಪಗಳಲ್ಲಿ ಸರಿಯಾದ ರೂಪವನ್ನು ಗುರುತಿಸಿ. ತಪಿಲ್ಲದಿದ್ದರೆ ‘‘ಸುಧಾರಣೆ ಬೇಕಿಲ್ಲ’’ ಎಂಬ (4) ನ್ನು ಗುರುತಿಸಿ (ಪ್ರಶ್ನೆ ಸಂಖ್ಯೆ 33 - 38).
ಉದಾಹರಣೆ : | ||
ಲೋಕಾಯುಕ್ತ ಲಂಚ ಹಗುರಣಕ್ಕೆ ಸಂಬಂಧಿಸಿ ಎಂಟು ಜನರ ಬಂಧನ | ||
(1) | ಹಾಗರಣ | |
(2) | ಹಗರಣ | |
(3) | ಹಗರನ | |
(4) | ತಪ್ಪಿಲ್ಲ | |
ಇಲ್ಲಿ ಗೆರೆ ಎಳೆದ ‘‘ಹಗುರಣ’’ ತಪ್ಪಾಗಿದ್ದು ಅದರ ಸರಿಯಾದ ರೂಪವು ‘‘ಹಗರಣ’’ ಎಂದಾಗಿದೆ ಅದರಿಂದ (2) ನ್ನು ಗುರುತಿಸಬೇಕು. |
33. | ನವೆಂಬರ್ ಒಂದರಂದು ಕರ್ನಾಟಕ ರಾಜೊಸ್ತವ ಕಾರ್ಯಕ್ರಮ ನಡೆಯುತ್ತದೆ. | |
(1) | ರಾಜ್ಯೋತ್ಸವ | |
(2) | ರಾಜೋತ್ಸವ | |
(3) | ರಾಜ್ಯೋಸ್ತವ | |
(4) | ತಪ್ಪಿಲ್ಲ |
ಸರಿ ಉತ್ತರ
(1) ರಾಜ್ಯೋತ್ಸವ
34. | ಶ್ರೀಯವರಿಗೆ ಗ್ರೀಕ್ ದುರಂತ ನಾಟಕಗಳ ಛಾಯೆ ಎದ್ದು ಕಂಡಿದೆ. | |
(1) | ದುರಂಥ | |
(2) | ದುರಂತಾ | |
(3) | ಧುರಂತ | |
(4) | ತಪ್ಪಿಲ್ಲ |
ಸರಿ ಉತ್ತರ
(4) ತಪ್ಪಿಲ್ಲ
35. | ಬಾದಾಮಿ ಚಾಲುಕ್ಯರ ಏಳಿಗೆಯಿಂದ ಕರ್ನಾಟಕ ಇತಿಹಾಸಕ್ಕೆ ಒಂದು ನಿರ್ದಿಷ್ಟ ಸ್ವರೂಪ ಬಂದಿದೆ. | |
(1) | ಏಳೀಗೆ | |
(2) | ಹೇಳಿಗೆ | |
(3) | ಹೆಳಿಗೆ | |
(4) | ತಪ್ಪಿಲ್ಲ |
ಸರಿ ಉತ್ತರ
(4) ತಪ್ಪಿಲ್ಲ
36. | ವಿಧ್ಯಾರ್ಥಿ ಸಂಘದ ಚುನಾವಣೆಯನ್ನು ನಡೆಸಲು ನಿರ್ಧರಿಸಲಾಗಿದೆ. | |
(1) | ವಿದ್ಯಾರ್ಥಿ ಸಂಘ | |
(2) | ವಿದ್ಯರ್ಥಿ ಸಂಘ | |
(3) | ವಿದ್ಯಾರ್ತಿ ಸಂಘ | |
(4) | ತಪ್ಪಿಲ್ಲ |
ಸರಿ ಉತ್ತರ
(4) ತಪ್ಪಿಲ್ಲ
37. | ಪ್ರಜೆಗಳಿಂದ ಪ್ರಜೆಗಳಿಗಾಗಿ ನಡೆಸುವಂತಹ ಆಡಳಿತ ಪ್ರಜಾಪ್ರಭುತ್ವ. | |
(1) | ಪ್ರಜೆಪ್ರಭುತ್ವ | |
(2) | ಪ್ರಜಪ್ರಭುತ್ವ | |
(3) | ಪ್ರಜಾಪ್ರಭತ್ವ | |
(4) | ತಪ್ಪಿಲ್ಲ |
ಸರಿ ಉತ್ತರ
(4) ತಪ್ಪಿಲ್ಲ
38. | ಬುದ್ಧನ ಅನುಯಾಯಿಗಳು ಬೌದ್ಧ ಧರ್ಮವನ್ನು ಪ್ರಸಾರ ಮಾಡಿದರು. | |
(1) | ಅನುಯಾಹಿಗಳು | |
(2) | ಅನುಹಾಯಿಗಳು | |
(3) | ಅನುವಾಯಿಗಳು | |
(4) | ತಪ್ಪಿಲ್ಲ |
ಸರಿ ಉತ್ತರ
(4) ತಪ್ಪಿಲ್ಲ
ಸೂಚನೆಗಳು: ಖಾಲಿ ಬಿಟ್ಟಿರುವ ಜಾಗಕ್ಕೆ ಸರಿಯಾದ ಉತ್ತರ ಗುರುತಿಸಿ ಅಥವಾ ಪ್ರಶ್ನೆಗೆ ಸರಿಯಾದ ಉತ್ತರ ಆಯ್ಕೆ ಮಾಡಿ. (ಪ್ರಶ್ನೆ ಸಂಖ್ಯೆ 39 - 65)
ಉದಾಹರಣೆ : | ||
ನಡೆಯುತ್ತಿದೆ ಎಂಬುದು .............. ದ ಪದ. | ||
(1) | ಭೂತಕಾಲ | |
(2) | ವರ್ತಮಾನ ಕಾಲ | |
(3) | ಭವಿಷ್ಯತ್ ಕಾಲ | |
(4) | ಹಿಂದಿನ ಕಾಲ | |
ಇಲ್ಲಿ ‘‘ವರ್ತಮಾನ ಕಾಲ’’ ಎಂಬುದು ಸರಿಯಾದ ಉತ್ತರ ಅದುದರಿಂದ (2) ನ್ನು ಗುರುತಿಸಬೇಕು. |
39. | ‘ಜ್’ ಈ ಅಕ್ಷರದ ಉತ್ಪತ್ತಿ ಸ್ಥಾನ ಇದಾಗಿದೆ. | |
(1) | ಕಂಠ್ಯ | |
(2) | ತಾಲವ್ಯ | |
(3) | ಮೂರ್ದನ್ಯ | |
(4) | ಅನುನಾಸಿಕ |
ಸರಿ ಉತ್ತರ
(2) ತಾಲವ್ಯ
40. | ‘ರಾಷ್ಟ್ರ’ ಈ ಪದದಲ್ಲಿ ಯಾವ ಜಾತಿಯ ಸಂಯುಕ್ತಾಕ್ಷರಗಳಿವೆ? | |
(1) | ಪರಜಾತೀಯ | |
(2) | ಸಜಾತೀಯ | |
(3) | ವಿಜಾತೀಯ | |
(4) | ಸ್ವಜಾತೀಯ |
ಸರಿ ಉತ್ತರ
(3) ವಿಜಾತೀಯ
41. | ದೇವರು ಒಳ್ಳೆಯದನ್ನು ಮಾಡಲಿ ಎನ್ನುವದು .............. ವಾಕ್ಯ. | |
(1) | ಸಂಭಾವನಾರ್ಥಕ | |
(2) | ಕ್ರಿಯಾರ್ಥಕ | |
(3) | ವಿಧ್ಯರ್ಥಕ | |
(4) | ನಿಷೇಧಾರ್ಥಕ |
ಸರಿ ಉತ್ತರ
(3) ವಿಧ್ಯರ್ಥಕ
42. | ‘ಕನ್ನಡಿಗ’ ಎಂಬುದು ..............ದ ಉದಾಹರಣೆ. | |
(1) | ಕೃದಂತಾವ್ಯಯ | |
(2) | ತದ್ಧಿತನಾಮ | |
(3) | ಭಾವಕೃದಂತ | |
(4) | ಭೂತಕೃದಂತ |
ಸರಿ ಉತ್ತರ
(2) ತದ್ಧಿತನಾಮ
43. | ವಾಚಿಸು ಎಂದರೆ | |
(1) | ಮಾತನಾಡು | |
(2) | ಓದು | |
(3) | ಅಧ್ಯಯನ ಮಾಡು | |
(4) | ಪಿಸುಗುಟ್ಟು |
ಸರಿ ಉತ್ತರ
(2) ಓದು
44. | ‘ಪಂಡಿತ’ ಎಂಬುದು ಈ ಕೆಳಗಿನ ಯಾವ ನಾಮಪದಕ್ಕೆ ಉದಾಹರಣೆಯಾಗಿದೆ ? | |
(1) | ರೂಢನಾಮ | |
(2) | ಅಂಕಿತನಾಮ | |
(3) | ಸರ್ವನಾಮ | |
(4) | ಅನ್ವರ್ಥಕನಾಮ |
ಸರಿ ಉತ್ತರ
(4) ಅನ್ವರ್ಥಕನಾಮ
45. | ಹಣದಾಸೆಗೆ ಎಂಬುದು ಯಾವ ಸಂಧಿ ? | |
(1) | ಸವರ್ಣದೀರ್ಘ ಸಂಧಿ | |
(2) | ಆದೇಶ ಸಂಧಿ | |
(3) | ಲೋಪ ಸಂಧಿ | |
(4) | ಜಸ್ತ ್ವ ಸಂಧಿ |
ಸರಿ ಉತ್ತರ
(3) ಲೋಪ ಸಂಧಿ
46. | ಸಜ್ಜನ ಎಂಬುದು ಯಾವ ಲಿಂಗ ? | |
(1) | ನಪುಂಸಕ ಲಿಂಗ | |
(2) | ಪುಲ್ಲಿಂಗ | |
(3) | ನಿತ್ಯ ನಪುಂಸಕ ಲಿಂಗ | |
(4) | ಸಾಮಾನ್ಯ ಲಿಂಗ |
ಸರಿ ಉತ್ತರ
(2) ಪುಲ್ಲಿಂಗ
47. | ಕನ್ನಡ ವ್ಯಾಕರಣವನ್ನು ಸಂಸ್ಕೃತದಲ್ಲಿ ಬರೆದ ಪಂಡಿತರು ಯಾರು? | |
(1) | ಒಂದನೆಯ ನಾಗವರ್ಮ | |
(2) | ಎರಡನೇ ನಾಗವರ್ಮ | |
(3) | ಕೇಶಿರಾಜ | |
(4) | ಒಂದನೇ ಗುಣವರ್ಮ |
ಸರಿ ಉತ್ತರ
(2) ಎರಡನೇ ನಾಗವರ್ಮ
48. | ಪ್ರಶ್ನಾರ್ಥಕ ಮತ್ತು ಆತ್ಮಾರ್ಥಕ ಸರ್ವನಾಮಗಳು ಯಾವುವು ? | |
(1) | ತಾನ್, ಯಾ | |
(2) | ಯಾ, ತಾನ್ | |
(3) | ಆನ್ ಏನ್ | |
(4) | ಏನ್ ಆನ್ |
ಸರಿ ಉತ್ತರ
(2) ಯಾ, ತಾನ್
49. | ಕನ್ನಡದ ಯಾವ ಶಬ್ದಗಳಲ್ಲಿ ಪ್ರತ್ಯಯಗಳು ಲಿಂಗ ವಿವಕ್ಷೆ ಮಾಡುತ್ತವೆ? | |
(1) | ಮಹತ್ | |
(2) | ಆ ಮಹತ್ | |
(3) | ಮೇಲಿನ ಎರಡು | |
(4) | ಯಾವುದು ಅಲ್ಲ |
ಸರಿ ಉತ್ತರ
(3) ಮೇಲಿನ ಎರಡು
50. | ಬಾಳುವವನಿಗೆ ಒಂದು ಮಾತು . | |
(1) | ಮಡಿಕೆಗೆ ಒಂದು ಹೊಡೆತ | |
(2) | ದೊಣ್ಣೆಗೆ ಒಂದು ನಿಮಿಷ | |
(3) | ಬಾಳೆ ಗಿಡಕ್ಕೆ ಒಂದು ಗೊನೆ | |
(4) | ಯಾವುದು ಅಲ್ಲ |
ಸರಿ ಉತ್ತರ
(3) ಬಾಳೆ ಗಿಡಕ್ಕೆ ಒಂದು ಗೊನೆ
51. | ದೇಶ್ಯ ಪದವನ್ನು ಗುರುತಿಸಿ | |
(1) | ನಕಲಿ | |
(2) | ಕಾಗದ | |
(3) | ಮಹತ್ | |
(4) | ನೇಸರ |
ಸರಿ ಉತ್ತರ
(4) ನೇಸರ
52. | ಕೂಸು ಮಲಗಿತು ಎಂಬುದು .............. | |
(1) | ಅಕರ್ಮಕ ಕ್ರಿಯಾಪದ | |
(2) | ಸಕರ್ಮಕ ಕ್ರಿಯಾಪದ | |
(3) | ಕಾಲಸೂಚಕ ಪ್ರತ್ಯಯ | |
(4) | ಅಖ್ಯಾತ ಪ್ರತ್ಯಯ |
ಸರಿ ಉತ್ತರ
(1) ಅಕರ್ಮಕ ಕ್ರಿಯಾಪದ
53. | ತಾರನು ಎನ್ನುವುದು .............. | |
(1) | ವರ್ತಮಾನ ಕಾಲದ ಕ್ರಿಯಾಪದ | |
(2) | ಸಂಭಾವಾರ್ಥಕ ಕ್ರಿಯಾಪದ | |
(3) | ನಿಷೇಧಾರ್ಥಕ ಕ್ರಿಯಾಪದ | |
(4) | ಭವಿಷತ್ ಕಾಲದ ಕ್ರಿಯಾಪದ |
ಸರಿ ಉತ್ತರ
(3) ನಿಷೇಧಾರ್ಥಕ ಕ್ರಿಯಾಪದ
54. | ಕರ್ಮಿಣಿ ಪ್ರಯೋಗದಲ್ಲಿ ಕರ್ತೃ ಪದವು ಪಡೆದುಕೊಳ್ಳುವ ವಿಭಕ್ತಿ ಪ್ರತ್ಯಯ | |
(1) | ಪ್ರಥಮಾ | |
(2) | ದ್ವಿತೀಯಾ | |
(3) | ತೃತೀಯಾ | |
(4) | ಸಪ್ತಮೀ |
ಸರಿ ಉತ್ತರ
(3) ತೃತೀಯಾ
55. | ಕೊಳಕು ಪದದ ವಿರುದ್ಧ ರೂಪ | |
(1) | ಸ್ವಚ್ಛ | |
(2) | ಕ್ಲೀನು | |
(3) | ಮಡಿ | |
(4) | ಶುದ್ಧ |
ಸರಿ ಉತ್ತರ
(1) ಸ್ವಚ್ಛ
56. | ನೀಲಗಾರರು ಈ ಪರಂಪರೆಗೆ ಸೇರಿದವರು | |
(1) | ಜಾನಪದ | |
(2) | ಶರಣ ಪರಂಪರೆ | |
(3) | ಮಂಟೇಸ್ವಾಮಿ | |
(4) | ಯಕ್ಷಗಾನ |
ಸರಿ ಉತ್ತರ
(3) ಮಂಟೇಸ್ವಾಮಿ
57. | ಕೆರೆಗೆ ಹಾರ - ಇದು | |
(1) | ಜನಪದ ಕಥನಗೀತೆ | |
(2) | ಜನಪದ ಗೀತೆ | |
(3) | ಜನಪದ ಮಹಾಕಾವ್ಯ | |
(4) | ಜನಪದ |
ಸರಿ ಉತ್ತರ
(1) ಜನಪದ ಕಥನಗೀತೆ
58. | ಪಡೆದೀಯೈದು ಪದವನ್ನು ಬಿಡಿಸಿದಾಗ | |
(1) | ಪಡೆದು + ಈಯೈದು | |
(2) | ಪಡೆದೀ + ಐದು | |
(3) | ಪಡೆದು + ಈ + ಐದು | |
(4) | ಪಡೆದು + ಇ + ಐದು |
ಸರಿ ಉತ್ತರ
(3) ಪಡೆದು + ಈ + ಐದು
59. | ‘ಭಾಷಾ ವಿಜ್ಞಾನದ ಮೂಲ ತತ್ವಗಳು’ ಕೃತಿಯನ್ನು ರಚಿಸಿದವರು .............. | |
(1) | ಕುಶಾಲಪ್ಪಗೌಡ | |
(2) | ರಾಜೇಶ್ವರಿ. ಎಂ. | |
(3) | ಡಾ. ಸೌದತ್ತಿ ಮಠ | |
(4) | ಚಿದಾನಂದ ಮೂರ್ತಿ |
ಸರಿ ಉತ್ತರ
(4) ಚಿದಾನಂದ ಮೂರ್ತಿ
60. | ‘ಹೊಸಅಂಗಿ’ - ಈ ಸಂಧಿಯ ಉದಾಹರಣೆ | |
(1) | ಆಗಮ | |
(2) | ಲೋಪ | |
(3) | ಪ್ರಕೃತಿಭಾವ | |
(4) | ಆದೇಶ |
ಸರಿ ಉತ್ತರ
(3) ಪ್ರಕೃತಿಭಾವ
61. | ‘ಬಸವ’ - ಈ ಪದದ ತತ್ಸಮ | |
(1) | ಋಷಭ | |
(2) | ೠಷಭಾ | |
(3) | ವಸವ | |
(4) | ವೃಷಭ |
ಸರಿ ಉತ್ತರ
(4) ವೃಷಭ
62. | ಅರಿಸಮಾಸ ಪದ | |
(1) | ರಣಶೂರ | |
(2) | ಮಂಗಳಾರತಿ | |
(3) | ಹೊಸಗನ್ನಡ | |
(4) | ಮೂಲೋಕ |
ಸರಿ ಉತ್ತರ
(2) ಮಂಗಳಾರತಿ
63. | .............. ಎಂಬುದು ಭಾವಸೂಚಕಾವ್ಯಯ. | |
(1) | ಭಲಿ | |
(2) | ಬಾಲ | |
(3) | ಭಾಳು | |
(4) | ಭಲಾ |
ಸರಿ ಉತ್ತರ
(4) ಭಲಾ
64. | ಸುಲಿದ ಬಾಳೆ ಹಣ್ಣಿನಂದದಿ ಕನ್ನಡ ನುಡಿ ಎಂಬುದು .............. | |
(1) | ಉಪಮಾ ಅಲಂಕಾರ | |
(2) | ರೂಪಕ ಅಲಂಕಾರ | |
(3) | ದೀಪಕ ಅಲಂಕಾರ | |
(4) | ಉತ್ಪ್ರೇಕ್ಷಾಲಂಕಾರ |
ಸರಿ ಉತ್ತರ
(1) ಉಪಮಾ ಅಲಂಕಾರ
65. | ಸ್ವತಂತ್ರವಾಗಿ ಉಚ್ಚಾರವಾಗದ ಅಕ್ಷರಗಳನ್ನು ಹೀಗೆ ಕರೆಯುತ್ತಾರೆ | |
(1) | ಯೋಗವಾಹ | |
(2) | ಪ್ಲುುತ | |
(3) | ಸ್ವರ | |
(4) | ವ್ಯಂಜನ |
ಸರಿ ಉತ್ತರ
(4) ವ್ಯಂಜನ
ಸೂಚನೆಗಳು : ಕೆಳಗಿನ ಪ್ರಶ್ನೆಗಳಲ್ಲಿ (ಪ್ರಶ್ನೆ ಸಂಖ್ಯೆ 66 - 69) ಕನ್ನಡ ಮೂಲದ್ದು ಅಲ್ಲದ (ಅನ್ಯಭಾಷೆಯಿಂದ ಸ್ವೀಕೃತವಾದ) ಶಬ್ದವನ್ನು ಗುರುತಿಸಿ.
ಉದಾಹರಣೆ : | ||
(1) | ದಾರಿ | |
(2) | ಹಾದಿ | |
(3) | ರಸ್ತೆ | |
(4) | ಕಾಡು | |
ಈ ನಾಲ್ಕು ಪದಗಳಲ್ಲಿ ‘‘ರಸ್ತೆ’’ ಮಾತ್ರ ಅನ್ಯಭಾಷೆಯಿಂದ ಸ್ವೀಕೃತವಾದ ಪದವಾಗಿದೆ. ಆದುದರಿಂದ ಇಲ್ಲಿ (3) ನ್ನು ಗುರುತಿಸಬೇಕು. |
66. | (1) | ದಿವಾನ |
(2) | ಅರಸು | |
(3) | ಆಳು | |
(4) | ಅಂಬಿಗ |
ಸರಿ ಉತ್ತರ
(1) ದಿವಾನ
67. | (1) | ಜೀವನ |
(2) | ಹಾಲು | |
(3) | ಗದ್ದೆ | |
(4) | ಗುಲಾಮ |
ಸರಿ ಉತ್ತರ
(4) ಗುಲಾಮ
68. | (1) | ಇನಾಮು |
(2) | ಬಹುಮಾನ | |
(3) | ಉಡುಗೆ | |
(4) | ಗಮನ |
ಸರಿ ಉತ್ತರ
(1) ಇನಾಮು
69. | (1) | ಮನೆ |
(2) | ಜವಾನ | |
(3) | ಮೋಡ | |
(4) | ಸಾಹಸ |
ಸರಿ ಉತ್ತರ
(2) ಜವಾನ
ಸೂಚನೆಗಳು : ಕೆಳಗಿನ ವಾಕ್ಯಗಳಲ್ಲಿ (ಪ್ರಶ್ನೆ ಸಂಖ್ಯೆ 70 - 72) ದೋಷವಿದ್ದರೆ ಅದನ್ನು ಸರಿಪಡಿಸಲು ಮುಂದೆ ಕೊಟ್ಟಿರುವ ಪರ್ಯಾಯ ರೂಪಗಳಲ್ಲಿ ಸೂಕ್ತವಾದುದನ್ನು ಗುರ್ತಿಸಿ. ದೋಷವಿಲ್ಲದಿದ್ದರೆ ಸುಧಾರಣೆ ಬೇಕಿಲ್ಲ ಆಗ (4) ನ್ನು ಗುರುತಿಸಿ.
ಉದಾಹರಣೆ : | ||
ಮಕ್ಕಳು ಸಂಗೀತವನ್ನು ಸುಶ್ರಾವ್ಯವಾಗಿ ಆಡಿದರು. | ||
(1) | ಹಾಡಿದರು | |
(2) | ಆಲಿಸಿದರು | |
(3) | ಮಾಡಿಸಿದರು | |
(4) | ಸುಧಾರಣೆ ಬೇಕಿಲ್ಲ | |
ಇಲ್ಲಿ ‘‘ಆಡಿದರು’’ ಎಂಬುದು ದೋಷವಾಗಿದ್ದು ‘‘ಹಾಡಿದರು’’ ಎಂದಿರಬೇಕು ಆದುದರಿಂದ (1) ನ್ನು ಗುರುತಿಸಬೇಕು. |
70. | ರಸ್ತೆಯ ದುರಸ್ತಿ ಕಾರ್ಯದಿಂದ ಸಂಚಾರಕ್ಕೆ ಅನಾನುಕೂಲವಾಗಿದೆ. | |
(1) | ಅನನುಕೂಲ | |
(2) | ಅನಾನೂಕುಲ | |
(3) | ಅನಾನೂಕೂಲ | |
(4) | ಸುಧಾರಣೆ ಬೇಕಿಲ್ಲ |
ಸರಿ ಉತ್ತರ
(1) ಅನನುಕೂಲ
71. | ಗಂಧೋದಕದ ಸ್ನಾನ ಮಾಡುವುದು ಒಳ್ಳೆಯದು | |
(1) | ಗಂದೊಧಕ | |
(2) | ಘಂದೊದಕ | |
(3) | ಘಂಧೋದಕ | |
(4) | ಸುಧಾರಣೆ ಬೇಕಿಲ್ಲ |
ಸರಿ ಉತ್ತರ
(4) ಸುಧಾರಣೆ ಬೇಕಿಲ್ಲ
72. | ಚುನಾವಣೆಯ ಸಭೆಯಲ್ಲಿ ಬಹಳ ಜನ ಸೇರಿದ್ದರು. | |
(1) | ಚುಣಾವಣೆ | |
(2) | ಛುನಾವಣೆ | |
(3) | ಚುಣಾವನೆ | |
(4) | ಸುಧಾರಣೆ ಬೇಕಿಲ್ಲ |
ಸರಿ ಉತ್ತರ
(4) ಸುಧಾರಣೆ ಬೇಕಿಲ್ಲ
ಸೂಚನೆಗಳು: ಕೆಳಗಿನವುಗಳಲ್ಲಿ (ಪ್ರಶ್ನೆ ಸಂಖ್ಯೆ 73 - 77) ಗೆರೆಹಾಕಿದ ಭಾಗಗಳು ತಪ್ಪಾಗಿವೆ. ಅವುಗಳ ಮುಂದೆ ಕೊಟ್ಟ ನಾಲ್ಕು ಪರ್ಯಾಯ ರೂಪಗಳಿಂದ ಸರಿಯಾದ ಉತ್ತರವನ್ನು ಗುರುತಿಸಿ.
ಉದಾಹರಣೆ : | ||
ಕುವೆಂಪು ಚೋಮನದುಡಿ ಎಂಬ ಕಾದಂಬರಿಯನ್ನು ರಚಿಸಿದ್ದಾರೆ. | ||
(1) | ಬೆಟ್ಟದ ಜೀವ | |
(2) | ಕಾನೂರ ಹೆಗ್ಗಡತಿ | |
(3) | ಚಿಕ್ಕವೀರ ರಾಜೇಂದ್ರ | |
(4) | ದುರ್ಗಾಸ್ತಮಾನ | |
ಇಲ್ಲಿ ‘‘ಕಾನೂರ ಹೆಗ್ಗಡತಿ’’ ಸರಿಯಾದ ಉತ್ತರ ಆದುದರಿಂದ (2) ನ್ನು ಗುರುತಿಸಬೇಕು. |
73. | ಕನಕದಾಸರ ಪೂರ್ವಾಶ್ರಮದ ಹೆಸರು ಶ್ರೀನಿವಾಸ ನಾಯಕ | |
(1) | ಶ್ರೀಪಾದರು | |
(2) | ಪುರಂದರ ದಾಸ | |
(3) | ಗೋಪಾಲದಾಸ | |
(4) | ವಿಜಯದಾಸ |
ಸರಿ ಉತ್ತರ
(2) ಪುರಂದರ ದಾಸ
74. | ಜೈಮಿನಿ ಭಾರತವು ಭಾಮಿನಿ ಷಟ್ಪದಿಯಲ್ಲಿದೆ. | |
(1) | ವಾರ್ಧಕ ಷಟ್ಪದಿ | |
(2) | ಕುಸುಮ ಷಟ್ಪದಿ | |
(3) | ಪರಿರ್ವಧಿನಿ ಷಟ್ಪದಿ | |
(4) | ಶರ ಷಟ್ಪದಿ |
ಸರಿ ಉತ್ತರ
(1) ವಾರ್ಧಕ ಷಟ್ಪದಿ
75. | ಕಾವೇರಿಯಿಂದ ಗೋದಾವರಿವರೆಗೆ ಹಬ್ಬಿದ ನಾಡು ಕನ್ನಡ ನಾಡು ಎಂಬುದಾಗಿ ಹರಿಶ್ಚಂದ್ರ ಕಾವ್ಯದಲ್ಲಿ ಹೇಳಲಾಗಿದೆ. | |
(1) | ವಿಕ್ರಮಾರ್ಜುನ ವಿಜಯ | |
(2) | ಸಾರ್ವ ಭೀಮ ವಿಜಯ | |
(3) | ಕವಿರಾಜ ಮಾರ್ಗ | |
(4) | ವಡ್ಡಾರಾಧನೆ |
ಸರಿ ಉತ್ತರ
(3) ಕವಿರಾಜ ಮಾರ್ಗ
76. | ನಂಜುಂಡಕವಿ ಮಿತ್ರಾವಿಂದಗೋವಿಂದ ನಾಟಕ ಬರೆದಿದ್ದಾನೆ. | |
(1) | ತಿರುಮಲಾರ್ಯ | |
(2) | ಸಿಂಗರಾರ್ಯ | |
(3) | ಸಿಂಗಿರಾಜ | |
(4) | ಚಾಮರಸ |
ಸರಿ ಉತ್ತರ
(2) ಸಿಂಗರಾರ್ಯ
77. | ನಯಸೇನನು ‘ಕರ್ಣಟಕ ಕಾದಂಬರಿ’ ಕೃತಿಯನ್ನು ಬರೆದನು | |
(1) | ಒಂದನೇ ನಾಗವರ್ಮ | |
(2) | ನಾಗವರ್ಮಾಚಾರ್ಯ | |
(3) | ಎರಡನೇ ನಾಗವರ್ಮ | |
(4) | ನಾಗಚಂದ್ರ |
ಸರಿ ಉತ್ತರ
(1) ಒಂದನೇ ನಾಗವರ್ಮ
ಸೂಚನೆಗಳು: ಮುಂದಿನ ವಾಕ್ಯಗಳಲ್ಲಿ (ಪ್ರಶ್ನೆ ಸಂಖ್ಯೆ 78 - 82) ಪದಗಳು ಕ್ರಮಬದ್ಧವಾಗಿಲ್ಲ. ಅವು ಅರ್ಥಪೂರ್ಣವಾಗುವಂತೆ ಗೆರೆಹಾಕಿ ಸೂಚಿಸಿದ ಭಾಗಗಳನ್ನು ಪುನಃ ಜೋಡಿಸಿ. ಅವುಗಳ ಅನುಕ್ರಮವನ್ನು ಗುರುತಿಸಿ.
ಉದಾಹರಣೆ : | ||
77. | ವಿದ್ಯಾರ್ಥಿಗಳು | |
P | ||
ಜಾಸ್ತಿಯಾಗಿದೆ | ||
Q | ||
ಆಕರ್ಷಿತರಾಗುತ್ತಿರುವುದು | ||
R | ||
ದುರಭ್ಯಾಸಗಳ ಕಡೆಗೆ | ||
S | ||
(1) | P S R Q | |
(2) | Q R S P | |
(3) | S Q R P | |
(4) | Q S R P |
ಇಲ್ಲಿ P S R Q ಎಂಬುದು ಸರಿಯಾದ ಜೋಡಣೆಯ ಕ್ರಮ. ಅದುದರಿಂದ ಇಲ್ಲಿ (1) ನ್ನು ಗುರುತಿಸಬೇಕು. |
78. | ಕರುಳಿಲ್ಲ | |
P | ||
ತಲೆಯಾತಂಗೆ | ||
Q | ||
ತಲೆಯಿಲ್ಲ | ||
R | ||
ಒಡಲು ನೋಡಾ | ||
S | ||
(1) | P Q R S | |
(2) | S Q R P | |
(3) | R Q P S | |
(4) | R P Q S |
ಸರಿ ಉತ್ತರ
(3) R Q P S
79. | ಪ್ರಶ್ನೆ | |
P | ||
ವಿಜ್ಞಾನದ | ||
Q | ||
ಕೇಳುವುದು | ||
R | ||
ಅಡಿಪಾಯವೇ | ||
S | ||
(1) | Q R S P | |
(2) | Q S P R | |
(3) | R S P Q | |
(4) | P R Q S |
ಸರಿ ಉತ್ತರ
(2) Q S P R
80. | ಮರಸೊಬಗು | |
P | ||
ಹೊಸಚಿಗುರು | ||
Q | ||
ಹಳೆಬೇರು | ||
R | ||
ಕೂಡಿರಲು | ||
S | ||
(1) | R Q S P | |
(2) | Q R P S | |
(3) | S P Q R | |
(4) | S P R Q |
ಸರಿ ಉತ್ತರ
(1) R Q S P
81. | ದೈಯಿಕ ವ್ಯಾಯಾಮ ಮಾಡುವುದು | |
P | ||
ಶರೀರಕ್ಕೆ | ||
Q | ||
ಪ್ರತಿದಿನವೂ | ||
R | ||
ತುಂಬಾ ಒಳ್ಳೆಯದು | ||
S | ||
(1) | Q R S P | |
(2) | R P Q S | |
(3) | P R Q S | |
(4) | Q R P S |
ಸರಿ ಉತ್ತರ
(2) R P Q S
82. | ವರ್ಗಕ್ಕೆ | |
P | ||
ದ್ರಾವಿಡ ಭಾಷಾ | ||
Q | ||
ಸೇರಿದೆ | ||
R | ||
ಕನ್ನಡ ಭಾಷೆಯು | ||
S | ||
(1) | R S P Q | |
(2) | P R S Q | |
(3) | S R Q P | |
(4) | S Q P R |
ಸರಿ ಉತ್ತರ
(4) S Q P R
83. | ಎಸ್.ಎಲ್. ಭೈರಪ್ಪರವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿಸಿಕೊಟ್ಟ ಕೃತಿ | |
(1) | ಮಂದ್ರ | |
(2) | ದಾಟು | |
(3) | ಪರ್ವ | |
(4) | ವಂಶವೃಕ್ಷ |
ಸರಿ ಉತ್ತರ
(2) ದಾಟು
84. | ‘ಇಗೋ ಕನ್ನಡ’ ಎಂಬ ಹೆಸರಿನ ಅಂಕಣ ಬರೆಯುತ್ತಿದ್ದವರು | |
(1) | ಪಾ.ವೆಂ. ಆಚಾರ್ಯ | |
(2) | ಅಮೃತ ಸೋಮೇಶ್ವರ | |
(3) | ಕೆ.ವಿ. ನಾರಾಯಣ | |
(4) | ಜಿ. ವೆಂಕಟಸುಬ್ಬಯ್ಯ |
ಸರಿ ಉತ್ತರ
(4) ಜಿ. ವೆಂಕಟಸುಬ್ಬಯ್ಯ
85. | ಪಟ್ಟಿ I ಮತ್ತು ಪಟ್ಟಿ II ನ್ನು ಹೋಲಿಸಿ ಕೆಳಗೆ ನೀಡಿರುವ ಉತ್ತರಗಳ ಗುಂಪಿನಲ್ಲಿ ಸರಿಹೊಂದುವುದನ್ನು ಗುರುತಿಸಿ : |
ಪಟ್ಟಿ I | ಪಟ್ಟಿ II | |||
A. | ಹರಿಶ್ಚಂದ್ರ ಕಾವ್ಯ | I. | ಸಾಂಗತ್ಯ | |
B. | ಆದಿ ಪುರಾಣ | II. | ಷಟ್ಟದಿ | |
C. | ಭರತೇಶ ವೈಭವ | III. | ಕಂದ | |
D. | ಅಜಿತ ತೀರ್ಥಂಕರ ಪುರಾಣ | IV. | ಚಂಪೂ | |
ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ : |
A | B | C | D | ||
(1) | I | III | IV | II | |
(2) | II | IV | I | III | |
(3) | II | I | III | IV | |
(4) | III | II | IV | I |
ಸರಿ ಉತ್ತರ
(2) II IV I III
86. | ‘ಸಂಜೆಗಣ್ಣಿನ ಹಿನ್ನೋಟ’ ಇದು ಯಾರ ಆತ್ಮಕಥನ ? | |
(1) | ಎಂ. ಗೋಪಾಲ ಕೃಷ್ಣ ಅಡಿಗ | |
(2) | ಎಚ್.ಎಲ್. ನಾಗೇಗೌಡ | |
(3) | ರಾವ್ ಬಹಾದ್ದೂರ್ | |
(4) | ಎ.ಎನ್. ಮೂರ್ತಿರಾವ್ |
ಸರಿ ಉತ್ತರ
(4) ಎ.ಎನ್. ಮೂರ್ತಿರಾವ್
ಸೂಚನೆಗಳು : ಕೆಳಗಿನ ವಾಕ್ಯಗಳಲ್ಲಿ (ಪ್ರಶ್ನೆ ಸಂಖ್ಯೆ 87 - 92) (1) (2) (3) ಎಂಬ ಗೆರೆ ಎಳೆದ ಭಾಗಗಳಿವೆ. ಈ ಯಾವುದೇ ಭಾಗದಲ್ಲಿ ವ್ಯಾಕರಣ, ಕಾಗುಣಿತ ಅಥವಾ ಚಿಹ್ನೆಗಳಿಗೆ ಸಂಬಂಧಿಸಿದ ದೋಷವಿದ್ದರೆ ಆ ಭಾಗವನ್ನು ಗುರ್ತಿಸಿ. ದೋಷವಿಲ್ಲದಿದ್ದರೆ ‘‘ತಪ್ಪಿಲ್ಲ’’ ಎಂಬ ನಾಲ್ಕನೆ (4) ಭಾಗವನ್ನು ಗುರುತಿಸಿ.
ಉದಾಹರಣೆ : | ||
ವಿದ್ಯಾರ್ಥಿಗಳು | ||
(1) | ||
ಶಾಲೆಗೆ | ||
(2) | ||
ಮುಗಿಸಿಕೊಂಡು ಬಂದರು | ||
(3) | ||
ತಪ್ಪಿಲ್ಲ | ||
(4) | ||
ಇಲ್ಲಿ ಭಾಗ (2) ರಲ್ಲಿ ‘‘ಶಾಲೆಯನ್ನು’’ ಎಂದಿರ ಬೇಕಾಗಿತ್ತು. ಈ ಭಾಗದಲ್ಲಿ ದೋಷವಿರುವುದರಿಂದ ಇಲ್ಲಿ (2) ನ್ನು ಗುರುತಿಸಬೇಕು. |
87. | ರಾಘವಾಂಕನನ್ನು | |
(1) | ||
ಶಟ್ಪದಿಯ ಬ್ರಹ್ಮ | ||
(2) | ||
ಎಂದು ಕರೆಯಲಾಗಿ | ||
(3) | ||
ತಪ್ಪಿಲ್ಲ | ||
(4) |
ಸರಿ ಉತ್ತರ
(2)
88. | ನಾನು | |
(1) | ||
ನಮ್ಮ ಗುರುಗಳಿಗೆ | ||
(2) | ||
ಹಲವು ವಿಚಾರಗಳನ್ನು ಕಲಿತೆನು | ||
(3) | ||
ತಪ್ಪಿಲ್ಲ | ||
(4) |
ಸರಿ ಉತ್ತರ
(2)
89. | ಮತಧಾನವು | |
(1) | ||
ನಮ್ಮ ಪವಿತ್ರ | ||
(2) | ||
ಕರ್ತವ್ಯವಾಗಿ. | ||
(3) | ||
ತಪ್ಪಿಲ್ಲ | ||
(4) |
ಸರಿ ಉತ್ತರ
(1)
90. | ಬುದ್ಧಿವಂತನಾದ ಅವನು | |
(1) | ||
ಪಾಠವನ್ನು | ||
(2) | ||
ಚೆನ್ನಾಗಿ ಓದಿದರು | ||
(3) | ||
ತಪ್ಪಿಲ್ಲ | ||
(4) |
ಸರಿ ಉತ್ತರ
(3)
91. | ನಮ್ಮ ಪರೀಕ್ಷೆ | |
(1) | ||
ಮುಗಿಯಿತು. | ||
(2) | ||
ತಂದೆಗೆ ಮಗನು ತಿಳಿಸಿದನು | ||
(3) | ||
ತಪ್ಪಿಲ್ಲ | ||
(4) |
ಸರಿ ಉತ್ತರ
(2)
92. | ದೇವರು | |
(1) | ||
ಸಮಸ್ತಲೋಕಗಳನ್ನು | ||
(2) | ||
ಪ್ರೀತಿಯಿಂದ ಕಾಪಾಡುವನು | ||
(3) | ||
ತಪ್ಪಿಲ್ಲ | ||
(4) |
ಸರಿ ಉತ್ತರ
(4)
93. | ಕೆಳಗಿನವರಲ್ಲಿ ಪಂಪ ಪ್ರಶಸ್ತಿ ವಿಜೇತ ಕವಿ | |
(1) | ಬಿ.ಎಂ. ಶ್ರೀ | |
(2) | ತಿ.ನಂ. ಶ್ರೀ | |
(3) | ದ.ರಾ. ಬೇಂದ್ರೆ | |
(4) | ಅ.ನ. ಕೃ. |
ಸರಿ ಉತ್ತರ
(2) ತಿ.ನಂ. ಶ್ರೀ
94. | ‘‘ನೀರೊಳಗಿರ್ದುಂ ಬೆಮರ್ತನುರಗ ಪತಾಕಂ’’ ಈ ಮಾತುಗಳು ಯಾವ ಕೃತಿಯಲ್ಲಿ ಬಂದಿವೆ? | |
(1) | ಗದಾಯುದ್ಧ | |
(2) | ರಾಮಚಂದ್ರ ಚರಿತ ಪುರಾಣ | |
(3) | ಕರ್ಣಾಟ ಭಾರತ ಕಥಾ ಮಂಜರಿ | |
(4) | ಪಂಪ ಭಾರತ |
ಸರಿ ಉತ್ತರ
(1) ಗದಾಯುದ್ಧ
95. | ವೈದೇಹಿ ಇದು ಯಾರ ಕಾವ್ಯ ನಾಮ ? | |
(1) | ತಿರುಮಲೆ ರಾಜಮ್ಮ | |
(2) | ಜಾನಕಿ ಎಸ್. ಮೂರ್ತಿ | |
(3) | ಬಿ.ಎನ್. ಸುಬ್ಬಮ್ಮ | |
(4) | ವೆಂಕಟಲಕ್ಷ್ಮಿ |
ಸರಿ ಉತ್ತರ
(2) ಜಾನಕಿ ಎಸ್. ಮೂರ್ತಿ
96. | ಅಜಗಣ್ಣ ಇದು ಯಾರ ವಚನಗಳ ಅಂಕಿತ ? | |
(1) | ಅಕ್ಕಮಹಾದೇವಿ | |
(2) | ಗಂಗಾಂಬಿಕೆ | |
(3) | ನೀಲಾಂಬಿಕೆ | |
(4) | ಮುಕ್ತಾಯಕ್ಕ |
ಸರಿ ಉತ್ತರ
(4) ಮುಕ್ತಾಯಕ್ಕ
ಸೂಚನೆಗಳು : ಈ ಕೆಳಗೆ (ಪ್ರಶ್ನೆ ಸಂಖ್ಯೆ 97- 100) P Q R S ಎಂಬ ನಾಲ್ಕು ವಾಕ್ಯಗಳನ್ನು ಕೊಡಲಾಗಿದೆ. ಈ ವಾಕ್ಯಗಳು ಸ್ಥಾನಪಲ್ಲಟವಾಗಿವೆ. ಅವುಗಳನ್ನು ಅರ್ಥಪೂರ್ಣವಾಗಿ ಜೋಡಿಸುವ ಉತ್ತರವನ್ನು ಗುರುತಿಸಬೇಕು.
ಉದಾಹರಣೆ : | ||
P. | ಪುಲಿಗೆರೆ, ಕಿಸುವೊಳಲ್, ಕೊಪ್ಪಳ ಮತ್ತು ಒಕ್ಕುಂದ ಇವೇ ಆ ನಾಲ್ಕು ನಗರಗಳು. | |
Q. | ಒಂಭತ್ತನೆಯ ಶತಮಾನದಲ್ಲಿ ಕನ್ನಡನಾಡು ಕಾವೇರಿಯಿಂದ ಗೋದಾವರಿಯವರೆಗೆ ಹಬ್ಬಿತ್ತು. | |
R. | ಆ ನಾಡಿನಲ್ಲಿನ ನಾಲ್ಕು ನಗರಗಳ ಮಧ್ಯದ ಕನ್ನಡವೇ ಕನ್ನಡದ ತಿರುಳೆಂದು ಕವಿ ಹೇಳಿದ್ದಾನೆ. | |
S. | ಆ ನಾಡಿನಲ್ಲಿ ವಾಸವಾಗಿದ್ದ ಜನತೆಯ ಉನ್ನತ ಸಂಸ್ಕೃತಿಯಿಂದಾಗಿ ಇಡೀ ವಿಶ್ವದಲ್ಲಿ ಕನ್ನಡ ನಾಡು ಒಂದು ವಿಶೇಷ ಸ್ಥಾನವನ್ನು ಪಡೆದಿತ್ತು. | |
(1) | Q S R P | |
(2) | S R Q P | |
(3) | P Q R S | |
(4) | R P Q S | |
ಇಲ್ಲಿ ಸರಿಯಾದ ಉತ್ತರ Q S R P ಆದುದರಿಂದ (1) ನ್ನು ಗುರುತಿಸಬೇಕು. |
97. | ಭಾರತರತ್ನ ಅಂಬೇಡ್ಕರರ ಬದುಕಿನ ಒಂದು ಘಟನೆ | |
P. | ದುಃಖದಿಂದ ಅಂಬೇಡ್ಕರ್ ಮನೆಗೆ ಬಂದರು | |
Q. | ಬಾಲಕ ಅಂಬೇಡ್ಕರ ಕ್ಷೌರಿಕನ ಬಳಿಗೆ ಹೋದರು | |
R. | ಅವರನ್ನು ಅಕ್ಕಂದಿರು ಸಮಾಧಾನ ಮಾಡಿ ಕೂದಲನ್ನು ತಾವೇ ಕತ್ತರಿಸಿದರು | |
S. | ಕ್ಷೌರಿಕನು ಕ್ಷೌರ ಮಾಡಲು ನಿರಾಕರಿಸಿದ. ನಾಯಿ ನರಿಗಳನ್ನು ಮುಟ್ಟುವ ಜನರು ನನ್ನನ್ನೇಕೆ ಮುಟ್ಟುವುದಿಲ್ಲ ನಾನು ಅಷ್ಟೇ ಕೀಳೆ? ಎಂದು ಚಿಂತಿಸಿದರು | |
(1) | P R S Q | |
(2) | Q S P R | |
(3) | Q P R S | |
(4) | R S Q P |
ಸರಿ ಉತ್ತರ
(2) Q S P R
98. | P. | ಅವನತಿಯ ಅಂಚಿನಲ್ಲಿರುವವನು ಉನ್ನತಿಗೇರಬಲ್ಲ |
Q. | ಮಾನವತೆ ಮತ್ತು ದಾನವತೆಗಳೆರಡಕ್ಕೂ ಮನುಷ್ಯನ ಅಂತರ್ಯದಲ್ಲಿ ಜಾಗವಿದೆ | |
R. | ಉನ್ನತಿಯ ಶಿಖರದಲ್ಲಿರುವನು ಅವನತಿಯಂಚಿಗೆ ಸರಿದು ಬಿಡಬಲ್ಲ | |
S. | ಅವನತಿ ಮತ್ತು ಉನ್ನತಿಗಳೆರಡೂ ವ್ಯಕ್ತಿಯ ನಡೆಯನ್ನೇ ಅವಲಂಬಿಸಿರುತ್ತವೆ. | |
(1) | P Q R S | |
(2) | Q S R P | |
(3) | R S Q P | |
(4) | S R Q P |
ಸರಿ ಉತ್ತರ
(2) Q S R P
99. | P. | 2500 ವರ್ಷಗಳ ಹಿಂದೆ ಸಂಸ್ಕೃತದಲ್ಲಿ ಬರೆದ ‘‘ಮಹಾಕಾವ್ಯವೇ’ ‘ಮಹಾಭಾರತ’ ಇದರಲ್ಲಿ 18 ಪರ್ವಗಳಿವೆ |
Q. | ಈ ಗೀತೆ ಕೂಡಾ ಮಹಾಭಾರತದ 6 ನೇ ಪರ್ವದಲ್ಲಿದ್ದು ಇದರಲ್ಲಿಯೂ 18 ಅಧ್ಯಾಯಗಳಿರುತ್ತವೆ | |
R. | ಕೃಷ್ಣಾರ್ಜುನರ ನಡುವೆ ನಡೆದ ಸಂಭಾಷಣೆ ಇದಾಗಿದ್ದು, | |
S. | ಇದನ್ನು ಹಿಂದೂಗಳ ಪವಿತ್ರ ಗ್ರಂಥ’ ಎನ್ನುತ್ತಾರೆ ಪದಶಃ ಅರ್ಥ ‘‘ಭಗವಂತ ಹಾಡಿದ ಗೀತೆ’’ ಯೇ ‘‘ಭಗವದ್ಗೀತೆ’’ - ಯಾಗಿದೆ. | |
(1) | R P S Q | |
(2) | S R Q P | |
(3) | S P R Q | |
(4) | P R S Q |
ಸರಿ ಉತ್ತರ
(4) P R S Q
100. | ಗುರುವಿನ ಬಳಿ ಒಬ್ಬ ಕೇಳುತ್ತಾನೆ ‘ಗುರುವೇ ದಾರಿಯಾವುದು....’ | |
P. | ನೀನು ದಾರಿಯ ಬಗ್ಗೆ ಯೋಚಿಸುತ್ತಿಲ್ಲ ನಿನ್ನ ಬಗ್ಗೆ ಚಿಂತಿಸುತ್ತಿದ್ದೆ ಅದಕ್ಕೆ | |
Q. | ಹಾಗಿದ್ದಲ್ಲಿ ನನಗೇಕೆ ಅದು ಕಾಣಿಸುತ್ತಿಲ್ಲ? | |
R. | ಅಯ್ಯಾ ಅದು ನಿನ್ನ ಕಣ್ಣ ಎದುರಲ್ಲೇ ಇದೆ ಎನ್ನುತ್ತಾನೆ ಗುರು | |
S. | ಹಾಗಿದ್ದಲ್ಲಿ ಅದು ನಿಮಗೆ ಕಾಣಿಸುತ್ತದೋ ? ಎಲ್ಲಿಯವರೆಗೆ ನನಗೆ ಕಾಣಿಸುವುದಿಲ್ಲ ನಿನಗೆ ಕಾಣಿಸುತ್ತದೆ ಎಂಬಂತೆ ಯೋಚಿಸುತ್ತೀಯೋ ಅಲ್ಲಿಯವರೆಗೆ ನಿನ್ನ ಕಣ್ಣುಗಳಿಗೆ ಮಂಜು ಮುಸುಕಿರುತ್ತದೆ. | |
(1) | P R Q S | |
(2) | R Q P S | |
(3) | Q R S P | |
(4) | R P S Q |
ಸರಿ ಉತ್ತರ
(2) R Q P S
ಇಲ್ಲಿ ನೀಡಲಾಗಿರುವ ಉತ್ತರಗಳು KPSC ಯು ಪ್ರಕಟಿಸಿದ್ದಾಗಿರುತ್ತದೆ
0 Comments